ಟೆಲಿ ಮಾರ್ಕೆಟಿಂಗ್ ಕರೆ, ಸಂದೇಶಗಳಿಗೆ ಕಡಿವಾಣ
Team Udayavani, Jul 20, 2018, 6:00 AM IST
ಹೊಸದಿಲ್ಲಿ: ವಿವಿಧ ಟೆಲಿ ಮಾರ್ಕೆಟಿಂಗ್ ಕಂಪೆನಿಗಳಿಂದ ನಿಮ್ಮ ಮೊಬೈಲಿಗೆ ಬರುವ ಅನಾವಶ್ಯಕ ಕರೆಗಳು ಹಾಗೂ ಕಿರು ಸಂದೇಶಗಳ ಕಿರಿಕಿರಿಯಿಂದ ಹೈರಾಣಾಗಿರುವ ಮೊಬೈಲ್ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಇಂತಹ ಕರೆಗಳಿಗೆ ಹಾಗೂ ಸಂದೇಶಗಳಿಗೆ ಆರಂಭಿಕ ಹಂತದಲ್ಲೇ ಸಂಪೂರ್ಣವಾಗಿ ಲಗಾಮು ಹಾಕಲು ನಿರ್ಧರಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮ ಜಾರಿಗೊಳಿಸಿದೆ.
ಅದರ ಪ್ರಕಾರ ನಿರ್ದಿಷ್ಟ ಮೊಬೈಲ್ ಸೇವಾ ಸಂಸ್ಥೆ ಯಲ್ಲಿ ಟೆಲಿ ಮಾರ್ಕೆಟಿಂಗ್ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ವಾಗಲಿದೆ. ಮೊಬೈಲ್ ಗ್ರಾಹಕರಿಗೆ ಅವರ ಒಪ್ಪಿಗೆ ಇಲ್ಲದೆ ಟೆಲಿ ಮಾರ್ಕೆಟಿಂಗ್ನ ಯಾವುದೇ ಕರೆ ಅಥವಾ ಸಂದೇಶ ಕಳುಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಅಂದರೆ, ಮೊಬೈಲ್ ಸೇವಾ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಆ ಸಂಸ್ಥೆಯ ಎಲ್ಲ ಗ್ರಾಹಕರಿಗೆ ಕರೆ ಮಾಡುವುದು, ಸಂದೇಶ ಕಳುಹಿಸುವುದು ಇನ್ನು ಶಿಕ್ಷಾರ್ಹ ಅಪರಾಧ.
ಈ ಹಿಂದೆಯೂ ಟೆಲಿ ಮಾರ್ಕೆಟಿಂಗ್ ಕಂಪೆನಿಗಳ ಕಿರಿಕಿರಿ ನಿಯಂತ್ರಣಕ್ಕೆ ಟ್ರಾಯ್ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ ಅವು ಸಮರ್ಪಕವಾಗಿ ಅನುಷ್ಠಾನ ಗೊಳ್ಳದ ಕಾರಣದಿಂದಾಗಿ ಹೊಸ ನಿಬಂಧನೆಗಳನ್ನು ಕಡ್ಡಾಯಗೊಳಿಸಿದೆ. ಈ ನಿಯಮಗಳನ್ನು ಉಲ್ಲಂ ಸುವ ಟೆಲಿಕಾಂ ಸಂಸ್ಥೆಗಳಿಗೆ ಅಥವಾ ಮೊಬೈಲ್ ಸೇವಾ ಸಂಸ್ಥೆಗಳಿಗೆ ಆಯಾ ಅಪರಾಧದ ತೀವ್ರತೆಯ ಆಧಾರದ ಮೇರೆಗೆ ಕನಿಷ್ಠ 1,000 ರೂ.ನಿಂದ ಗರಿಷ್ಠ 50 ಲಕ್ಷ ರೂ.ಗಳವರೆಗೆ ದಂಡ ವಿಧಿಸುವುದಾಗಿ ಟ್ರಾಯ್ ಎಚ್ಚರಿಸಿದೆ.
ಈವರೆಗೆ ಮೊಬೈಲ್ಗೆ ಅತಿಯಾಗಿ ಟೆಲಿ ಮಾರ್ಕೆಟಿಂಗ್ ಕರೆ ಸಂದೇಶಗಳು ಬಂದಾಗ ಆತ ಮೊಬೈಲ್ ಸೇವೆ ನೀಡುತ್ತಿರುವ ಕಂಪೆನಿಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡಿ ಅಥವಾ ನಿಗದಿತ ಸಂಖ್ಯೆಗೆ ಸಂದೇಶ ಕಳುಹಿಸಿ ಅಂಥ ಕರೆಗಳನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಬೇಕಿತ್ತು.
ಅನಾವಶ್ಯಕ ಕರೆ, ಸಂದೇಶಗಳಿಗೆ ಆರಂಭಿಕ ಹಂತದಲ್ಲೇ ಲಗಾಮು ಹಾಕಲು ನಿರ್ಧಾರ
ಮೊಬೈಲ್ ಸೇವಾ ಸಂಸ್ಥೆಗಳಲ್ಲಿ, ಟೆಲಿ ಮಾರ್ಕೆಟಿಂಗ್ ಸಂಸ್ಥೆಗಳ ನೋಂದಣಿ ಕಡ್ಡಾಯ
ಗ್ರಾಹಕರ ಒಪ್ಪಿಗೆಯಿಲ್ಲದೆ ಕರೆ, ಸಂದೇಶ ಕಳುಹಿಸುವುದು ಇನ್ನು ದಂಡಾರ್ಹ ಅಪರಾಧ
ನಿಯಮ ಉಲ್ಲಂಘನೆಗೆ 1,000 ರೂ.ನಿಂದ ಗರಿಷ್ಠ 50 ಲಕ್ಷ ರೂ.ವರೆಗೆ ದಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ