ಮೋದಿಗೆ ಪುನಃ ಗೆಲುವಿನ ಭರವಸೆ
Team Udayavani, Aug 21, 2018, 6:00 AM IST
ನವದೆಹಲಿ: ಈಗ ಲೋಕಸಭೆಗೆ ಚುನಾವಣೆ ನಡೆಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಪುನಃ ಅಧಿಕಾರಕ್ಕೇರುವುದು ಖಚಿತ. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಾಗದು. ಇಂಡಿಯಾ ಟುಡೇ ಮೂಡ್ ಆಫ್ ದಿನ ನೇಶನ್ ಜುಲೈನಲ್ಲಿ ನಡೆಸಿದ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಎನ್ಡಿಎ 281 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಯುಪಿಎ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಇತರ ಪಕ್ಷಗಳು ಉಳಿದ 140 ಕ್ಷೇತ್ರಗಳನ್ನು ಬಾಚಿಕೊಳ್ಳಲಿವೆ ಎಂದು ಹೇಳಿದೆ.
ಎನ್ಡಿಎ ಶೇ. 36ರಷ್ಟು ಮತಗಳನ್ನು ಪಡೆಯಲಿದ್ದು, ಯುಪಿಎ ಶೇ. 31ರಷ್ಟು ಮತ ಪಡೆಯಲಿವೆ. ಎನ್ಡಿಎಗೆ ಶೇ. 4 ನಷ್ಟ ವಾದರೆ, ಯುಪಿಎಗೆ ಶೇ. 4ಗಳಿಕೆಯಾಗಲಿದೆ. ಸದ್ಯ ಎನ್ಡಿಎಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅನ್ನೂ ಪರಿಗಣಿಸಲಾಗಿದೆ. ಒಂದು ವೇಳೆ ಜೆಡಿಎಸ್ ಹಾಗೂ ಟಿಡಿಪಿ ಮತ್ತು ಪಿಡಿಪಿ ಪಕ್ಷಗಳು ಯಾವುದಾದರೂ ಮೈತ್ರಿಕೂಟಕ್ಕೆ ಸೇರಿದರೆ ಆಗ ಮೈತ್ರಿಕೂಟಗಳ ಸ್ಥಿತಿ ಬದಲಾಗುತ್ತದೆ.
ಬಿಜೆಪಿ ವರ್ಸಸ್ ಕಾಂಗ್ರೆಸ್: ಬಿಜೆಪಿ ಅತಿದೊಡ್ಡ ಪಕ್ಷವಾಗಿಯೇ ಮುಂದುವರಿ ಯಲಿದ್ದು, 245 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಕಾಂಗ್ರೆಸ್ 83 ಸ್ಥಾನಗಳಲ್ಲಿ ಜಯಿಸಲಿದ್ದು, 2014ರ ಚುನಾವಣೆಗಿಂತ ಬಹುತೇಕ ದುಪ್ಪಟ್ಟಾಗಿರಲಿದೆ.
ಮೋದಿಯೇ ಪ್ರಧಾನಿ: ಪ್ರಧಾನಿಗೆ ಉತ್ತಮ ಆಯ್ಕೆ ಯಾರು ಎಂಬ ಪ್ರಶ್ನೆಗೆ ಶೇ.49ರಷ್ಟು ಜನ ಮೋದಿಯನ್ನೇ ಆಯ್ಕೆ ಮಾಡಿದ್ದಾರೆ. ಕೇವಲ ಶೇ.27ರಷ್ಟು ಜನರು ರಾಹುಲ್ ಗಾಂಧಿ ಆರಿಸಿದರೆ, ಶೇ. 3ರಷ್ಟು ಜನರು ಪ್ರಿಯಾಂಕಾ ಗಾಂಧಿ ಉತ್ತಮ ಅಭ್ಯರ್ಥಿ ಎಂದಿದ್ದಾರೆ.
ಪ್ರಮುಖ ಸಮಸ್ಯೆ
34% ನಿರುದ್ಯೋಗ
24% ಬೆಲೆ ಏರಿಕೆ
18% ಭ್ರಷ್ಟಾಚಾರ
05% ಅಪನಗದೀಕರಣದಿಂದ ಆದಾಯ ನಷ್ಟ
05% ಮಹಿಳಾ ಸುರಕ್ಷತೆ
281 ಎನ್ಡಿಎ 122ಯುಪಿಎ 140 ಇತರೆ
245 ಬಿಜೆಪಿ 83 ಕಾಂಗ್ರೆಸ್ 215 ಇತರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ