ದಾಭೋಲ್ಕರ್, ಗೌರಿ ಹತ್ಯೆಗಳಲ್ಲಿ ಸಾಮ್ಯತೆ: ಸಿಬಿಐ
Team Udayavani, Aug 27, 2018, 12:01 PM IST
ಪುಣೆ : ಪುಣೆಯ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಹಾಗೂ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಶೈಲಿಗಳು ಪರಸ್ಪರ ಹೋಲುತ್ತವೆ ಎಂದು ಸಿಬಿಐ, ಪುಣೆಯ ಸ್ಥಳೀಯ ನ್ಯಾಯಾಲಯವೊಂದಕ್ಕೆ ತಿಳಿಸಿದೆ. ಈ ಮೂಲಕ ಈ ಎರಡೂ ಪ್ರಕರಣಗಳಲ್ಲಿ ಒಂದೇ ಗುಂಪಿನ ಕೈವಾಡವಿದೆ ಎಂಬುದನ್ನು ಸಿಬಿಐ, ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಡಲೆತ್ನಿಸಿದೆ. ಇದಲ್ಲದೆ, ಗೌರಿ ಅವರನ್ನು ಕೊಂದ ಆರೋಪ ಎದುರಿಸುತ್ತಿರುವವರಲ್ಲಿ ಒಬ್ಟಾತ, ಸಚಿನ್ಗೆ ಪಿಸ್ತೂಲು, ಮೂರು ಗುಂಡುಗಳು ಹಾಗೂ ನಿಯತಕಾಲಿಕೆಯೊಂದನ್ನು ನೀಡಿರುವುದಾಗಿ ತಿಳಿಸಿ ದ್ದಾನೆಂದು ಸಿಬಿಐ, ನ್ಯಾಯಾಲಯಕ್ಕೆ ಹೇಳಿದೆ.