ಗಣೇಶ ವಿಸರ್ಜನೆ: 18 ಸಾವು
Team Udayavani, Sep 25, 2018, 7:20 AM IST
ಮುಂಬಯಿ: ಮಹಾರಾಷ್ಟ್ರದ ಹಲವೆಡೆ ರವಿವಾರ ನಡೆದ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ 18 ಮಂದಿ ನೀರುಪಾಲಾಗಿದ್ದಾರೆ. ರಾಯಗಢ ಜಲ್ನಾ ಹಾಗೂ ಪುಣೆ ಗ್ರಾಮೀಣ ಭಾಗದಲ್ಲಿ ತಲಾ ಮೂವರು ಸಾವನ್ನಪ್ಪಿದ್ದರೆ, ಸತಾರಾ ಹಾಗೂ ಭಂಡಾರಾದಲ್ಲಿ ತಲಾ ಇಬ್ಬರು, ಪಿಂಪಿ-ಚಿಂಚವಾಡ, ಬುಲ್ಡಾನಾ, ನಾಂದೇಡ್ ಹಾಗೂ ಅಹಮದ್ ನಗರಗಳಲ್ಲಿ ತಲಾ ಒಬ್ಬ ಸಾವನ್ನಪ್ಪಿದ್ದರೆ, ಕಂಜುಮಾರ್ಗ್ ಪ್ರಾಂತ್ಯದಲ್ಲಿ ಒಬ್ಬ ಮೃತಪಟ್ಟಿದ್ದಾನೆ.