ಚಲಿಸುತ್ತಿದ್ದ ರೈಲಿನ ಎದುರು ಹಾರಿ ನಿವೃತ್ತ ಜಡ್ಜ್, ಪತ್ನಿ ಆತ್ಮಹತ್ಯೆ
Team Udayavani, Oct 6, 2018, 2:56 PM IST
ಆಂಧ್ರಪ್ರದೇಶ: ಜಿಲ್ಲಾ ನಿವೃತ್ತ ನ್ಯಾಯಾಧೀಶ ಹಾಗೂ ಪತ್ನಿ ಚಲಿಸುತ್ತಿದ್ದ ರೈಲಿನ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ತಿರುಪತಿ-ರೇನಿಗುಂಟಾ ಪ್ರದೇಶದಲ್ಲಿ ನಡೆದಿದೆ.
ತಿರುಪತಿ ನಿವಾಸಿಯಾಗಿರುವ ನಿವೃತ್ತ ನ್ಯಾಯಾಧೀಶರಾದ ಪಿ. ಸುಧಾಕರ್(65ವರ್ಷ) ಅವರ ಮೃತದೇಹ ತಿರುಪತಿ, ರೇನಿಗುಂಟಾ ರೈಲ್ವೆ ಹಳಿ ಮಧ್ಯೆ ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ತೀವ್ರ ತೆರನಾದ ಅನಾರೋಗ್ಯದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಪತಿಯ ಸಾವಿನ ತಿಳಿಯುತ್ತಿದ್ದಂತೆಯೇ ಪತ್ನಿ ಪಿ.ವರಲಕ್ಷ್ಮಿ(56ವರ್ಷ) ಅವರು ಕೂಡಾ ಮತ್ತೊಂದು ರೈಲಿನಲ್ಲಿ ಆಗಮಿಸಿ ಅದೇ ಸ್ಥಳದಲ್ಲಿ ರೈಲಿನ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ವಿವರಿಸಿದ್ದಾರೆ.