ಕಟುಕರು ಈಗ ಗೋ ಪೂಜೆ ಮಾಡುತ್ತಿದ್ದಾರೆ;ಕೈ ಗೆ ಬಿಜೆಪಿ ಶಾಸಕ ಟಾಂಗ್
Team Udayavani, Nov 11, 2018, 3:33 PM IST
ಭೂಪಾಲ್: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗೋ ಸಂರಕ್ಷಣೆ ಕುರಿತಾಗಿ ಆಶ್ವಾಸನೆ ನೀಡಿರುವುದನ್ನು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಟೀಕಿಸಿದ್ದು, ಗೋ ಹತ್ಯೆ ಮಾಡುತ್ತಿದ್ದ ಕಟುಕರು ಈಗ ಗೋ ಭಕ್ತರಾಗಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಎಎನ್ಐನೊಂದಿಗೆ ಮಾತನಾಡಿದ ಶರ್ಮಾ ಕಪಟ ಮಾಡುತ್ತಿರುವ ಕಾಂಗ್ರೆಸ್ ಅಧಿಕಾರ ಪಡೆಯುವ ಸಲುವಾಗಿ ಗೋ ಸಂರಕ್ಷಣೆ ಮಾಡುವ ಸುಳ್ಳು ಆಶ್ವಾಸನೆ ನೀಡಿದೆ. ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಗೋವಿನ ತಲೆ ಕಡಿದಿದ್ದಾರೆ. ಕಟುಕರ ಪಕ್ಷ ಈಗ ಗೋ ಭಕ್ತರ ಪಕ್ಷವಾಗಿ ಬದಲಾಗಿದೆ.ಕಟುಕರಿಗೆ ಕೇವಲ ಮತಗಳಿಗಾಗಿ ಗೋವುಗಳು ನೆನಪಾಗಿವೆ ಎಂದಿದ್ದಾರೆ.
ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಬಿಡಗುಡೆ ಗೊಳಿಸಿದ ಪ್ರಣಾಳಿಕೆಯಲ್ಲಿ ಗೋ ಸಂರಕ್ಷಣೆ ಮಾಡಲು ಪ್ರತೀ ಗ್ರಾಮದಲ್ಲಿ ಗೋಶಾಲೆ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದೆ.