ಪಂಜಾಬ್ಗೆ ನುಸುಳಿರುವ ಪಾಕ್ ಉಗ್ರರು ದಿಲ್ಲಿಯತ್ತ ?ಕಟ್ಟೆಚ್ಚರ ಘೋಷಣೆ
Team Udayavani, Nov 15, 2018, 7:25 PM IST
ಹೊಸದಿಲ್ಲಿ : ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗೆ ಸೇರಿದ ಕನಿಷ್ಠ ಆರು ಮಂದಿ ಉಗ್ರರು ಫಿರೋಜ್ಪುರದಲ್ಲಿನ ಅಂತಾರಾಷ್ಟ್ರೀಯ ಗಡಿ ಮೂಲಕ ದೇಶದೊಳಗೆ ನುಸುಳಿ ಬಂದಿದ್ದು ಇವರು ಬಹುಷಃ ರಾಷ್ಟ್ರ ರಾಜಧಾನಿ ದಿಲ್ಲಿಯತ್ತ ಸಾಗುತ್ತಿರಬಹುದು ಎಂದು ಪಂಜಾಬ್ ಪೊಲೀಸ್ ಉಗ್ರ ನಿಗ್ರಹ ದಳ ಎಚ್ಚರಿಸಿದೆ. ಮಾತ್ರವಲ್ಲದೆ ಪಂಜಾಬ್ ನಲ್ಲಿ ಕಟ್ಟೆಚ್ಚರ ಘೋಷಿಸಿದೆ.
ಜೆಇಎಂ ಉಗ್ರರು ಫಿರೋಜ್ಪುರ ಪ್ರದೇಶದಲ್ಲಿನ ಅಂತಾರಾಷ್ಟ್ರೀಯ ಗಡಿ ದಾಟಿ ಪಂಜಾಬ್ ಪ್ರವೇಶಿಸಿದ್ದಾರೆ ಎಂದು ಉಗ್ರ ನಿಗ್ರಹ ಗುಪ್ತಚರ ದಳದ ಇನ್ಸ್ಪೆಕ್ಟರ್ ಜನರಲ್ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಈ ಉಗ್ರರು ಪಂಜಾಬ್ ಕಡೆಯಿಂದ ದಿಲ್ಲಿಗೆ ಸಾಗುತ್ತಿರಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಅಂತೆಯೇ ಭದ್ರತಾ ವ್ಯವಸ್ಥೆಯನ್ನು, ವಿಶೇಷವಾಗಿ ಗಡಿ ಭಾಗದಲ್ಲಿ, ಹೆಚ್ಚಿಸಬೇಕೆಂದು ಅವರು ಹೇಳಿದ್ದಾರೆ.
ಭಾರತ – ಪಾಕ್ ಗಡಿಯಲ್ಲಿ ಎರಡನೇ ಹಂತದ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಮತ್ತು ಬಿಎಸ್ಎಫ್ ಮತ್ತು ಇತರ ಪೊಲೀಸ್/ರಕ್ಷಣಾ ವ್ಯವಸ್ಥೆಗಳ ಜತೆಗೆ ನಿಕಟವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದವರು ಎಚ್ಚರಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಾಧೋಪುರ ಸಮೀಪ ನಾಲ್ಕು ವ್ಯಕ್ತಿಗಳು ಬಂದೂಕು ತೋರಿಸಿ ಬೆದರಿಸಿ ಬೆಳ್ಳಿ ಬಣ್ಣದ ಟೊಯೋಟಾ ಇನ್ನೋವಾ ಟ್ಯಾಕ್ಸಿ ಯೊಂದನ್ನು ಸೆಳೆದುಕೊಂಡು ಹೋದ ಘಟನೆಯನ್ನು ಅನುಸರಿಸಿ ಗುಪ್ತಚರ ದಳದಿಂದ ಕಟ್ಟೆಚ್ಚರದ ಸೂಚನೆ ಬಂದಿದೆ. ಈ ಘಟನೆಯು 2016ರಲ್ಲಾದ ಪಠಾಣ್ಕೋಟ್ ವಾಯು ನೆಲೆ ಮೇಲಿನ ಪಾಕ್ ಉಗ್ರ ದಾಳಿ ರೀತಿಯ ಇನ್ನೊಂದು ಘಟನೆಯ ಸಂಭಾವ್ಯತೆಗೆ ಪುಷ್ಟಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್