6 ಲಕ್ಷ ಲಂಚ : ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಬೇಗುಸರಾಯ್ ಎಡಿಎಂ
Team Udayavani, Nov 17, 2018, 5:57 PM IST
ಬೇಗುಸರಾಯ್, ಬಿಹಾರ : ಬೇಗುಸರಾಯ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಲಂಚ ಸ್ವೀಕರಿಸುವಾಗಲೇ ಜಾಗೃತ ತನಿಖಾ ದಳದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಡಿಎಸ್ಪಿ ಗೋಪಾಲ್ ಪಾಸ್ವಾನ್ ನೇತೃತ್ವದ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬೇಗುಸರಾಯ್ ಎಡಿಎಂ ಓಂ ಪ್ರಕಾಶ್ ಪ್ರಸಾದ್ ತಮ್ಮ ಅಧಿಕೃತ ನಿವಾಸದಲ್ಲಿ 6 ಲಕ್ಷ ರೂ. ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದರು.
ಎಡಿಎಂ15 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ ಎಂದು ವಕೀಲ ಪ್ರಮೋದ್ ಕುಮಾರ್ ಸಿಂಗ್ ಅವರು ಎಡಿಎಂ ವಿರುದ್ಧ ಜಾಗೃತ ದಳಕ್ಕೆ ದೂರು ನೀಡಿದ್ದರು.
ಎಡಿಎಂ ಅವರನ್ನು ಈಗಿನ್ನು ಪಟ್ನಾಕ್ಕೆ ಒಯ್ದು ಅಲ್ಲಿ ಜಾಗತ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.