ಅಯೋಧ್ಯೆಯಲ್ಲಿ ಯಾಗ
Team Udayavani, Nov 21, 2018, 11:12 AM IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಡಿ.1-6ರ ವರೆಗೆ ವಿಶ್ವ ವೇದಾಂತ ಸಂಸ್ಥಾನ ಎಂಬ ಸಂಘಟನೆ “ಅಶ್ವಮೇಧ ಯಾಗ’ ನಡೆಸಲಿದೆ. ದೇಶದ ಲಕ್ಷಾಂತರ ಮಂದಿಯ ಭಾವನೆಗಳು ದೇಗುಲದ ಜತೆ ಬೆಸೆದುಕೊಂಡಿದೆ. ಹೀಗಾಗಿ ಡಿ.1-6ರ ವರೆಗೆ ಅಯೋಧ್ಯೆಯಲ್ಲಿ ಅಶ್ವಮೇಧ ಯಾಗ ಆಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಾಪಕ ಸ್ವಾಮಿ ಆನಂದ್ ಮಹಾರಾಜ್ ಮಂಗಳವಾರ ತಿಳಿಸಿದ್ದಾರೆ. ಸುಪ್ರೀಂಕೋರ್ಟಲ್ಲಿ ಸ್ಥಳ ಯಾರಿಗೆ ಸೇರಿದ್ದು ಎಂಬ ಬಗ್ಗೆ ಜನವರಿಯಲ್ಲಿ ವಿಚಾರಣೆ ನಡೆಯಲಿದೆ. ಒಟ್ಟು 14 ಅರ್ಜಿಗಳು ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿವೆ.