ಆಯ್ಕೆ ಸಮಿತಿ ಜತೆ ಚರ್ಚಿಸದೆ ಆಲೋಕ್ಗೆ ರಜೆ ಕೊಟ್ಟದ್ದೇಕೆ: ಸುಪ್ರೀಂ
Team Udayavani, Dec 6, 2018, 12:05 PM IST
ಹೊಸದಿಲ್ಲಿ : ಸಿಬಿಐ ವರ್ಸಸ್ ಸಿಬಿಐ ‘ಬೆಕ್ಕುಗಳ ಕಾದಾಟ’ದಲ್ಲಿ ಶಾಮೀಲಾಗಿದ್ದ ಆಲೋಕ್ ವರ್ಮಾ ಅವರನ್ನು ರಜೆಯಲ್ಲಿ ಕಳಿಸುವ ಮುನ್ನ ಆಯ್ಕೆ ಸಮಿತಿಯ ಜತೆಗೆ ಏಕೆ ಸಮಾಲೋಚಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಆಲೋಕ್ ವರ್ಮಾ ಮತ್ತು ಸಿಬಿಐ ನಂಬರ್ 2 ಆಗಿರುವ ರಾಕೇಶ್ ಆಸ್ಥಾನಾ ಅವರ ಒಳಜಗಳದಿಂದ ಸಿಬಿಐ ಘನತೆ, ಗೌರವ, ಪ್ರತಿಷ್ಠೆ ಮಣ್ಣುಪಾಲಾಗಿತ್ತು ಎಂದು ಈ ಮೊದಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.
ಸಿಬಿಐ ಮುಖ್ಯಸ್ಥ ಆಲೋಕ್ ವರ್ಮಾ ಅವರ ಅಧಿಕಾರಗಳನ್ನು ಕಿತ್ತು ಹಾಕುವ ಮುನ್ನ ಆಯ್ಕೆ ಸಮಿತಿಯನ್ನು ಸಮಾಲೋಚಿಸಬೇಕಿತ್ತು; ಆದರೆ ಸರಕಾರ ಯಾಕೆ ಹಾಗೆ ಮಾಡದೆ ಲೋಪ ಎಸಗಿತು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿತು.
ವರ್ಮಾ ಮತ್ತು ಆಸ್ಥಾನಾ ನಡುವಿನ ಜಗಳ ರಾತ್ರೋರಾತ್ರಿ ನಡೆದುದಲ್ಲ; ಅದಕೆ ದೀರ್ಘ ಇತಿಹಾಸವೂ ಇದ್ದಿರಬಹುದು. ಆದುದರಿಂದ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮುನ್ನ ಸರಕಾರ ಆಯ್ಕೆ ಸಮಿತಿಯೊಡನೆ ಸಮಾಲೋಚಿಸಬೇಕಿತ್ತು ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…