ಸುಗ್ರೀವಾಜ್ಞೆಗೆ ವಿರೋಧ
Team Udayavani, Dec 17, 2018, 6:35 AM IST
ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಹಾಗೂ ರಾಜ್ಯಸಭೆಯಲ್ಲಿ “ತ್ರಿವಳಿ ತಲಾಖ್’ ಮಸೂದೆ ಅಂಗೀಕರಿಸಿದರೆ ನಾವು ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಇನ್ನೊಂದೆಡೆ, ಜಮ್ಮುವಿನಲ್ಲಿ ಭಾನುವಾರ ಧರ್ಮ ಸಭೆ ನಡೆಸಿದ ವಿಶ್ವ ಹಿಂದೂ ಪರಿಷತ್, ಇದೇ ಅಧಿವೇಶನದಲ್ಲಿ ಮಂದಿರ ನಿರ್ಮಾಣ ಸುಗ್ರೀವಾಜ್ಞೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದೆ.