ಕಾಶ್ಮೀರಕ್ಕಾಗಿ ಸಮರ, ಕಾಶ್ಮೀರಿಗರ ವಿರುದ್ಧವಲ್ಲ
Team Udayavani, Feb 24, 2019, 12:30 AM IST
ಜೈಪುರ: “ನಮ್ಮದು ಕಾಶ್ಮೀರಕ್ಕಾಗಿನ ಹೋರಾಟವೇ ಹೊರತು, ಕಾಶ್ಮೀರಿಗರ ವಿರುದ್ಧದ ಹೋರಾಟವಲ್ಲ.’ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಶನಿವಾರ ರಾಜಸ್ಥಾನದ ಟೋಂಕ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಪುಲ್ವಾಮಾ ದಾಳಿಯ ಬಳಿಕ ಕಾಶ್ಮೀರಿ ಗರನ್ನು ಗುರಿಯಾಗಿಸಿಕೊಂಡು ಹಲ್ಲೆ, ಕಿರು ಕುಳದಂಥ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಪುಲ್ವಾಮಾ ದಾಳಿಯಲ್ಲಿ ಮಡಿದ ಸಿಆರ್ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ,
“ಭಯೋತ್ಪಾದನೆಯ ವಿರುದ್ಧದ ಹೋರಾ ಟದಲ್ಲಿ ನಾವು ಕಾಶ್ಮೀರದ ಯುವಜನತೆಯನ್ನೂ ನಮ್ಮೊಂದಿಗೆ ಕರೆದೊಯ್ಯಬೇಕು. ಏಕೆಂದರೆ, ಅವರು ಕೂಡ ಭಯೋತ್ಪಾದನೆಯ ಬಲಿಪಶುಗಳು. ಅವರನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ’ ಎಂದು ಹೇಳಿದ್ದಾರೆ.
ಕಾಶ್ಮೀರಿಗರ ಮೇಲಾಗುತ್ತಿರುವ ಹಲ್ಲೆ ಬಗ್ಗೆ ಪ್ರಸ್ತಾಪಿಸಿದ ಅವರು, “ಕಳೆದ ಕೆಲವು ದಿನಗಳಿಂದ ಕಾಶ್ಮೀರಿ ಯುವಕರನ್ನು ನಡೆಸಿಕೊಳ್ಳುತ್ತಿ ರುವ ರೀತಿ ಸರಿಯಿಲ್ಲ. ಕೆಲವು ಘಟನೆಗಳು ಸಣ್ಣದೇ ಆಗಿರಬಹುದು, ದೊಡ್ಡದೇ ಆಗಿರಬಹುದು. ಅಂಥ ಘಟನೆಗಳು ನಡೆಯಲೇಬಾರದು. ಕಾಶ್ಮೀರದ ಪ್ರತಿಯೊಂದು ಮಗುವೂ ಭಾರತದೊಂದಿಗಿದೆ. ಆ ಮಕ್ಕಳು ಕೂಡ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಪಾಲ್ಗೊಳ್ಳಲಿವೆ’ ಎಂದಿದ್ದಾರೆ.
ತುಕೆxà ಗ್ಯಾಂಗ್ ಪ್ರಸ್ತಾಪ: ಕಾಶ್ಮೀರಿಗರ ಮೇಲೆ ಹಲ್ಲೆ ಯಂಥ ಪ್ರಕರಣಗಳಿಂದಾಗಿ ತುಕೆxà ತುಕೆxà ಗ್ಯಾಂಗ್ಗಳು, ಅವರ ಬೆಂಬಲಿಗರಿಗೆ ಶಕ್ತಿ ತುಂಬಿ ದಂತಾಗುತ್ತದೆ. ಕಾಶ್ಮೀರದ ಪ್ರತಿಯೊಂದು ಕುಡಿ ಯನ್ನೂ ರಕ್ಷಿಸುವುದು ಪ್ರತಿ ಯೊಬ್ಬ ಭಾರತೀ ಯನ ಕರ್ತವ್ಯವಾಗಿದೆ ಎಂದೂ ಮೋದಿ ಹೇಳಿದ್ದಾರೆ.
ಪಾಕ್ ಪ್ರಧಾನಿಗೆ ಎಚ್ಚರಿಕೆ: ತಮ್ಮ ಭಾಷಣದಲ್ಲಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ ಪ್ರಧಾನಿ ಮೋದಿ, ನವಭಾರತವು ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡದೇ ಇರದು ಎಂದಿದ್ದಾರೆ. “ಇಮ್ರಾನ್ ಖಾನ್ ಅವರು ಪ್ರಧಾನಿಯಾದಾಗ ಅವರಿಗೆ ನಾನು ದೂರವಾಣಿ ಕರೆ ಮಾಡಿದ್ದೆ. ನಾವು ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿ ದ್ದೇವೆ. ಇನ್ನು ಮುಂದೆ ನಾವು ಒಂದಾಗಿ ಬಡತನ ಮತ್ತು ಅನಕ್ಷರತೆ ವಿರುದ್ಧ ಹೋರಾಡೋಣ ಎಂದು ಹೇಳಿದ್ದೆ. ಅದಕ್ಕೆ ಅವರೂ ಸಮ್ಮತಿಸಿದ್ದರು. ಈಗ ಖಾನ್ ಅವರು ತಮ್ಮ ಮಾತುಗಳನ್ನು ಉಳಿಸಿಕೊಳ್ಳ ಬೇಕಾಗಿದೆ’ ಎಂದು ಹೇಳಿದ್ದಾರೆ.
ಇಡೀ ಜಗತ್ತೇ ನಿಮ್ಮೊಂದಿಗಿದೆ: ಪುಲ್ವಾಮಾ ದಾಳಿಯಲ್ಲಿ ಮಡಿದವರ ಕುಟುಂಬದ ಜತೆಗೆ ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತೇ ಇದೆ. ನಮ್ಮ ಸೈನಿಕರು ಮತ್ತು ಸರಕಾರದ ಮೇಲೆ ನಂಬಿಕೆಯಿಡಿ ಎಂದು ಹುತಾತ್ಮರ ಕುಟುಂಬಗಳಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ, ಭಯೋತ್ಪಾದನೆಯು ಹೀಗೇ ಮುಂದುವರಿದರೆ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಅದರ ವಿರುದ್ಧ ಹೋರಾಡುವ ಸಮಯ ಬಂದಿದೆ. ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಸೇನೆಗೆ ಪರಮಾ ಧಿಕಾರ ನೀಡಿದ್ದೇವೆ. ಗಡಿಯಲ್ಲಿರುವ ಯೋಧರ ಮೇಲೆ, ತಾಯಿ ಭವಾನಿಯ ಆಶೀರ್ವಾದದ ಮೇಲೆ ಮತ್ತು ನಮ್ಮ ಸರಕಾರದ ಮೇಲೆ ಭರವಸೆಯಿಡಿ. ಎಲ್ಲವೂ ಸಾಧ್ಯವಾಗುತ್ತದೆ ಎಂದು ಮೋದಿ ಘೋಷಿಸಿದ್ದಾರೆ.
ಒಮರ್ ಅಬ್ದುಲ್ಲಾ ಮೆಚ್ಚುಗೆ: ಕಾಶ್ಮೀರಿಗರ ವಿರುದ್ಧದ ಹೋರಾಟವಲ್ಲ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿ ರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ, “ಕಾಶ್ಮೀರಿಗರ ಮೇಲಿನ ಹಲ್ಲೆ ಕುರಿತು ಮೌನ ಮುರಿದ ಪ್ರಧಾನಿ ಮೋದಿ ಅವರಿಗೆ ಧನ್ಯ ವಾದಗಳು. ಮುಂದಾದರೂ ಅಂಥ ಘಟನೆ ಗಳು ಮರುಕಳಿಸದಿರಲಿ’ ಎಂದಿದ್ದಾರೆ.
ಮೋದಿ ಹೇ ತೊ ಮುಮ್ಕಿನ್ ಹೆ
ರಾಜಸ್ಥಾನದ ಟೋಂಕ್ನಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ರಣಕಹಳೆ ಊದಿರುವ ಪ್ರಧಾನಿ ಮೋದಿ, ಪಕ್ಷದ ಪ್ರಚಾರಕ್ಕೆ ಹೊಸ ಉದ್ಘೋಷವೊಂದನ್ನು ರಚಿಸಿದ್ದಾರೆ.
ಅದೇನೆಂದರೆ, “ಮೋದಿ ಹೇ ತೊ ಮುಮ್ಕಿನ್ ಹೆ’. ಅಂದರೆ, “ಮೋದಿಯಿದ್ದರೆ ಎಲ್ಲವೂ ಸಾಧ್ಯ’ ಎಂದು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಕೆಲಸಗಳನ್ನು ನೋಡಿ ಜನರು ಸರಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಮೋದಿಯಿದ್ದರೆ ಎಲ್ಲವೂ ಸಾಧ್ಯ ಎಂದು ಜನರಿಗೂ ಗೊತ್ತು ಎಂದಿದ್ದಾರೆ ಪ್ರಧಾನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ