ಪಿಎಂ ಮೋದಿ ವಿರುದ್ಧ ರಾಹುಲ್ ಅವಹೇಳನ
Team Udayavani, Jan 11, 2019, 12:30 AM IST
ಹೊಸದಿಲ್ಲಿ: ಸಂಸತ್ನಲ್ಲಿ ರಫೇಲ್ ಚರ್ಚೆಗೆ ಉತ್ತರ ಕುರಿತಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ಬಳಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೈಪುರದ ರ್ಯಾಲಿಯಲ್ಲಿ ಮಾತಾಡಿದ್ದರು. ಅದಕ್ಕೆ ಟ್ವಿಟರ್ನಲ್ಲಿ ಸ್ಪಷ್ಟನೆ ಕೊಡುವ ಆತುರದಲ್ಲಿ ಮತ್ತೂಂದು ತಪ್ಪೆಸಗಿದ್ದಾರೆ. “ಮೋದಿ ಯವರೆ, ಮಹಿಳೆಯರಿಗೆ ಗೌರವ ಕೊಡುವ ಸದ್ವಿಚಾರ ಮನೆಗಳಿಂದಲೇ ಶುರುವಾಗುತ್ತದೆ. ಭಯ ಪಡಬೇಡಿ. ಯುಪಿಎ ಅವಧಿಯಲ್ಲಾದ ರಾಫೆಲ್ ಡೀಲ್ ಅನ್ನು ಬದಲಾಯಿಸಬೇಕೆಂದು ವಾಯು ಪಡೆ ನಿಮ್ಮನ್ನು ಕೇಳಿತ್ತೇ, ಇಲ್ಲವೇ ಎಂದಷ್ಟೇ ಹೇಳಿ’ ಎಂದು ಕೇಳಿರುವುದರ ಜತೆಗೆ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದು, ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, “ಮಹಿಳೆಯೊಬ್ಬರು ಲೋಕಸಭೆ ಯಲ್ಲಿ ಉತ್ತರಿಸಿದ್ದು ರಾಹುಲ್ ಅವರ ಅಹಂ ಅನ್ನು ಈ ಮಟ್ಟಕ್ಕೆ ಕೆಣಕಿದೆಯೆಂದು ನಾವು ಭಾವಿಸಿರಲಿಲ್ಲ” ಎಂದು ಚುಚ್ಚಿದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, “”ನಿರ್ಮಲಾ ಸೀತಾರಾಮನ್ ಅವರನ್ನು ರಾಹುಲ್ ಗಾಂಧಿ ಮಾಡಿರುವ ಟೀಕೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ತೀರಾ ಕೆಳಮಟ್ಟದ್ದು” ಎಂದಿದ್ದಾರೆ.
ವಿರೋಧ: ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ “”ಮೋದಿಯವರು ಒಬ್ಬ ಮಹಿಳೆಯ ಬಳಿ ತಮ್ಮನ್ನು ರಕ್ಷಿಸಿ ಎಂದು ಮೊರೆಯಿಟ್ಟರು ಎಂದು ರಾಹುಲ್ ಟೀಕೆ ಮಾಡಿದ್ದಾರೆ. ಅಂದರೆ, ಇಲ್ಲಿ ಮಹಿಳೆಯು ದುರ್ಬಲಳು ಎಂದು ರಾಹುಲ್ ಹೇಳಲು ಯತ್ನಿಸುತ್ತಿದ್ದಾರೆಯೇ” ಎಂದು ಕೇಳಿದ್ದಾರೆ. ಅಮೃತಾ ಭಿಂದರ್ ಎಂಬುವರು, “”ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಬಂದ ಟೀಕೆಗಳ ಬಗ್ಗೆ ಸದನದಲ್ಲಿ ನಿರ್ಮಲಾ ಸೀತಾರಾಮನ್ ಉತ್ತರಿಸಬಾರದಿತ್ತೇ” ಎಂದು ಖಾರವಾಗಿ ಕೇಳಿದ್ದಾರೆ. ಹೀಗೆ, ಹಲವಾರು ಮಂದಿ ರಾಹುಲ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ