ತೀರ್ಪು ಕಾಯ್ದಿರಿಸಿದ ಸುಪ್ರೀಂ
Team Udayavani, Mar 2, 2019, 12:30 AM IST
ಹೊಸದಿಲ್ಲಿ: ಸ್ಪಾಟ್ಫಿಕ್ಸಿಂಗ್ ಆರೋಪದಲ್ಲಿ ತನಗೆ ಹೇರಿರುವ ಆಜೀವ ನಿಷೇಧ ಹಿಂತೆಗೆದುಕೊಳ್ಳುವಂತೆ ಎಸ್. ಶ್ರೀಶಾಂತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದೆ. ಈ ಬಗ್ಗೆ ಮುಂದಿನ ತೀರ್ಪನ್ನು ನ್ಯಾಯಪೀಠ ಕಾದಿರಿಸಿದೆ.
“ತಪ್ಪು ಮಾಡದೆ ಶ್ರೀಶಾಂತ್ಗೆ ಆಜೀವ ನಿಷೇಧ ಹೇರಲಾಗಿದೆ. ಇದನ್ನು ತೆರವು ಮಾಡಬೇಕು’ ಎಂದು ಶ್ರೀಶಾಂತ್ ಪರ ವಕೀಲ ಸಲ್ಮಾನ್ ಖುರ್ಷಿದ್ ವಾದಿಸಿದರು. ಬಿಸಿಸಿಐ ಪರ ಹಾಜರಾದ ವಕೀಲ ಪರಾಗ್ ತ್ರಿಪಾಠಿ, ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಮಾಡಿರುವುದಕ್ಕೆ ತಮ್ಮ ಬಳಿ ಎಲ್ಲ ಸಾಕ್ಷ್ಯಗಳಿವೆ, ಆದ್ದರಿಂದ ಅವರ ನಿಷೇಧ ಕಾನೂನು ಪ್ರಕಾರ ಸಿಂಧುವಾಗುತ್ತದೆ’ ಎಂದರು.
ದೂರವಾಣಿ ಸಂಭಾಷಣೆ
ಶ್ರೀಶಾಂತ್ ಮತ್ತು ಬುಕ್ಕಿಗಳು ನಡೆಸಿದ್ದರೆನ್ನ ಲಾದ ದೂರವಾಣಿ ಸಂಭಾಷಣೆಯನ್ನು ಬಿಸಿಸಿಐ ಹಾಜರುಪಡಿಸಿತು. 2013ರ ಐಪಿಎಲ್ನ ಮೇ ತಿಂಗಳಿನಲ್ಲಿ ರಾಜಸ್ಥಾನ್ ರಾಯಲ್ಸ್-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೂ ಮುನ್ನ ಶ್ರೀಶಾಂತ್ ಫಿಕ್ಸಿಂಗ್ ನಡೆಸಿದ್ದರು. 2ನೇ ಓವರ್ನಲ್ಲಿ 14 ರನ್ ನೀಡಲು ಒಪ್ಪಿಕೊಂಡಿದ್ದರು. ಇದಕ್ಕಾಗಿ ಅವರು 10 ಲಕ್ಷ ರೂ. ಪಡೆದಿರುವ ಸಾಧ್ಯತೆಯೂ ಇದೆ ಎಂದು ಪರಾಗ್ ಹೇಳಿದರು. ಅಲ್ಲದೇ 10 ಲಕ್ಷ ರೂ. ತೆಗೆದುಕೊಂಡಿರುವ ಆರೋಪದ ಬಗ್ಗೆ ಶ್ರೀಶಾಂತ್, ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು.
ನೀಡಿದ್ದು 13 ರನ್ ಮಾತ್ರ
ಈ ಬಗ್ಗೆ ಉತ್ತರಿಸಿದ ಖುರ್ಷಿದ್, “ದೂರವಾಣಿ ಸಂಭಾಷಣೆಯಲ್ಲಿ ನಿಗದಿ ಯಾದಂತೆ ಶ್ರೀಶಾಂತ್ 14 ರನ್ ನೀಡಿಲ್ಲ, ನೀಡಿದ್ದು 13 ರನ್ ಮಾತ್ರ. ಆದ್ದರಿಂದ ಇಲ್ಲಿ ಫಿಕ್ಸಿಂಗ್ ಪ್ರಶ್ನೆಯೇ ಇಲ್ಲ. ಅವರು ಹಣವನ್ನೂ ತೆಗೆದುಕೊಂಡಿಲ್ಲ’ ಎಂದು ವಾದಿಸಿದರು. ಅಲ್ಲದೇ ಶ್ರೀಶಾಂತ್ಗೆ ಆಜೀವ ನಿಷೇಧ ಹೇರಿದ ಶಿಸ್ತು ಸಮಿತಿಯಲ್ಲಿ, ಬಿಸಿಸಿಐ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್ ಕೂಡ ಇದ್ದರು. ಆದ್ದರಿಂದ ಈ ಸಮಿತಿ ನೀಡಿದ ಶಿಕ್ಷೆಯೇ ತಪ್ಪು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್