ಪತ್ರಿಕೆ ಓದುತ್ತಿರುವಾಗಲೇ ಶಾಸಕ ಕನಕರಾಜು ನಿಧನ
Team Udayavani, Mar 22, 2019, 12:30 AM IST
ತಮಿಳುನಾಡಿನ ಸೂಲೂರು ಕ್ಷೇತ್ರವನ್ನು ಪ್ರತಿನಿಧಿಸುವ ಆಡಳಿತಾರೂಢ ಎಐಎಡಿಎಂಕೆಯ ಶಾಸಕ ಕೆ.ಕನಕರಾಜು (67) ಗುರುವಾರ ಬೆಳಗ್ಗೆ ಪತ್ರಿಕೆ ಓದುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ.
ಸ್ವಕ್ಷೇತ್ರದಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಸುದ್ದಿ ಕೇಳಿ ಸ್ಥಳೀಯ ವೈದ್ಯರು ಶಾಸಕರ ನಿವಾಸಕ್ಕೆ ಧಾವಿಸಿದರೂ, ಪರೀಕ್ಷೆಯ ಬಳಿಕ ಕನಕರಾಜು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿದಂತೆ ಪ್ರಮುಖರು ಶೋಕವ್ಯಕ್ತಪಡಿಸಿದ್ದಾರೆ.