ಪ್ರೇಮಿಗಳಿಗೆ ವಿವಾಹ ಭಾಗ್ಯ : ಮನವೊಲಿಸಿದ ದಲಿತ್ ಸೇವಾ ಸಮಿತಿ
Team Udayavani, Sep 13, 2018, 4:10 AM IST
ಪುತ್ತೂರು: ಪ್ರೀತಿಸಿ ದೂರವಾಗಿದ್ದ ಪ್ರೇಮಿಗಳನ್ನು ಒಂದು ಗೂಡಿಸುವಲ್ಲಿ ದಲಿತ್ ಸೇವಾ ಸಮಿತಿ ಯಶಸ್ವಿಯಾಗಿದೆ. ಪೇರಮೊಗ್ರು ದೇಂತಡ್ಕ ಶ್ರೀ ವನದುರ್ಗೆ ದೇವಸ್ಥಾನದಲ್ಲಿ ಸೆ. 11ರಂದು ಈ ಪ್ರೇಮಿಗಳ ಸರಳ ವಿವಾಹ ನೆರವೇರಿತು.
ನಾಪತ್ತೆಯಾಗಿದ್ದ ಯುವಕ
ಎಂಟು ವರ್ಷಗಳಿಂದ ಮೊಟ್ಟೆತ್ತಡ್ಕ ನಿವಾಸಿ ಲಲಿತಾ ನಾಯ್ಕ ಹಾಗೂ ಸಿಂಹವನ ಪಂಜಳ ನಿವಾಸಿ ಅಶೋಕ್ ಕುಮಾರ್ ಪ್ರೀತಿಸುತ್ತಿದ್ದರು. ಮದುವೆಗೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹುಡುಗ ಮದುವೆಗೆ ನಿರಾಕರಿಸಿದ್ದು, ಒಂದು ವರ್ಷದಿಂದ ನಾಪತ್ತೆಯಾಗಿದ್ದ. ನೊಂದ ಯುವತಿ ದಲಿತ್ ಸೇವಾ ಸಮಿತಿಗೆ ದೂರು ನೀಡಿದ್ದರು.
ಸಮಿತಿಯಿಂದ 11ನೇ ವಿವಾಹ
ನಾಪತ್ತೆಯಾಗಿದ್ದ ಹುಡುಗನನ್ನು ಪತ್ತೆ ಹಚ್ಚಿದ ದಲಿತ್ ಸೇವಾ ಸಮಿತಿಯವರು ಆತನ ಮನವೊಲಿಸಿ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ. ಇದು ದಲಿತ್ ಸೇವಾ ಸಮಿತಿ ವತಿಯಿಂದ ನಡೆದ 11ನೇ ವಿವಾಹವಾಗಿದೆ. ದಲಿತ್ ಸೇವಾ ಸಮಿತಿಯ ಪದಾಧಿಕಾರಿಗಳಾದ ರಾಜು ಹೊಸ್ಮಠ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಧನಂಜಯ ಬಲ್ನಾಡ್, ಮೋಹನ ನಾಯ್ಕ, ಸಾಂತಪ್ಪ ನರಿಮೊಗರು, ಮನೋಹರ್ ಕೋಡಿಜಾಲ್, ಲೋಕಯ್ಯ ನಾಯ್ಕ, ಲೋಕೇಶ್ ತೆಂಕಿಲ, ಅಣ್ಣಪ್ಪ ಕಾರೆಕ್ಕಾಡು, ಕೇಶವ ಪಡೀಲ್, ವೇದಾಕ್ಷಿ ಕುಂಬುರ್ಗ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…