ಬಿ.ಸಿ.ರೋಡ್: ಗಣೇಶನಿಗೆ ಬೃಹತ್ ಎಳ್ಳುಂಡೆ ಹಾರ
Team Udayavani, Sep 18, 2018, 1:30 AM IST
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಆಶ್ರಯದ ಸಾರ್ವಜನಿಕ ಗಣೇಶ ವಿಗ್ರಹದ ಶೋಭಾ ಯಾತ್ರೆ ಪೂರ್ವದಲ್ಲಿ ಶ್ರೀ ಗಣೇಶನಿಗೆ ಶ್ರೀ ರಾಮ ಗೆಳೆಯರ ಬಳಗ ಕೈಕಂಬ ಬಿ.ಸಿ.ರೋಡ್ ಅವರಿಂದ 3,500 ಎಳ್ಳುಂಡೆಗಳಿರುವ ಬೃಹದಾಕಾರದ ಹಾರವನ್ನು ಅರ್ಪಿಸಿದರು. ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ 39 ವರ್ಷದ ಶ್ರೀ ಗಣೇಶೋತ್ಸವ ನಡೆದಿತ್ತು.
ಹತ್ತು ಅಡಿ ಉದ್ದ
ಎಳ್ಳುಂಡೆ ಮಾಲೆಯು ಹತ್ತು ಅಡಿಗಳಷ್ಟು ಉದ್ದವಾಗಿದ್ದು ಸುಮಾರು ಹದಿನೈದು ಸಾವಿರ ಖರ್ಚಾಗಿತ್ತು. ಎಳ್ಳುಂಡೆ ಹಾರವನ್ನು ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆಯಲ್ಲಿ ತಂದು ಅರ್ಪಿಸಲಾಗಿತ್ತು. ಬಳಗದ ಅಧ್ಯಕ್ಷ ಸದಾಶಿವ ಕೈಕಂಬ, ಉಪಾಧ್ಯಕ್ಷ ಶೈಲೇಶ್ ಕೈಕಂಬ, ಗೌ. ಸಲಹೆಗಾರ ರಮೇಶ್, ಮೇಲ್ವಿಚಾರಕ ಮಚ್ಚೆಂದ ಸಾಲ್ಯಾನ್ ಗುರುಕೃಪ ಮೊದಲಾದವರು ಪಾಲ್ಗೊಂಡಿದ್ದರು. ಶೋಭಾಯಾತ್ರೆಯಲ್ಲಿ ವಿಗ್ರಹದ ಮೈಮೇಲಿದ್ದ ಹಾರವನ್ನು ಜಲಸ್ತಂಭನ ಸಂದರ್ಭ ಎಲ್ಲರಿಗೂ ಪ್ರಸಾದವಾಗಿ ಹಂಚಲಾಗಿತ್ತು. ಬಿ.ಸಿ.ರೋಡಿನಲ್ಲಿ ಮೆರವಣಿಗೆಯ ಆರಂಭದಲ್ಲಿ ಸುಡುಮದ್ದು ಪ್ರದರ್ಶನ, ವಿವಿಧ ಸ್ತಬ್ದ ಚಿತ್ರಗಳು, ಕೀಲುಕುದುರೆ, ನಾಸಿಕ್ ಬ್ಯಾಂಡ್ ಸಹಿತ ತಾಲೀಮು ಸೆಟ್ ಪಾಲ್ಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…