ಸಕಲೇಶಪುರ-ಮಂಗಳೂರು ಮಾರ್ಗ ರೈಲು ಓಡಾಟಕ್ಕೆ ಸಿದ್ಧ
Team Udayavani, Oct 3, 2018, 10:01 AM IST
ಸುಬ್ರಹ್ಮಣ್ಯ: ಮಂಗಳೂರು- ಸಕಲೇಶಪುರ ರೈಲು ಮಾರ್ಗದಲ್ಲಿ ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದೆ. ಮಂಗಳವಾರ ಹಗಲು ಎರಡು ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿವೆ, ಶೀಘ್ರ ಪ್ಯಾಸೆಂಜರ್ ರೈಲು ಓಡಾಟಕ್ಕೆ ಮಾರ್ಗ ಮುಕ್ತವಾಗಲಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಈ ರೈಲು ಮಾರ್ಗದ ನಡುವೆ 65 ಕಡೆ ಭೂಕುಸಿತ ಸಂಭವಿಸಿತ್ತು. ಬೃಹತ್ ಗಾತ್ರದ ಗುಡ್ಡಗಳು ಹಳಿ ಮೇಲೆ ಬಿದ್ದಿದ್ದವು. ತೆರವು ಕಾರ್ಯ ಒಂದು ತಿಂಗಳಿನಿಂದ ನಡೆದು, ವಾರದ ಹಿಂದೆ ಬಹುತೇಕ ಕಡೆ ಪೂರ್ಣವಾಗಿದ್ದರೂ ಸಿರಿಬಾಗಿಲು ಬಳಿ ಮಾತ್ರ ಬಾಕಿ ಇತ್ತು. ಇಲ್ಲಿ ಒಂದೆಡೆ ಗುಡ್ಡ ಕುಸಿದು ಸುರಂಗ ಮಾರ್ಗವೇ ಮುಚ್ಚಿಹೋಗಿತ್ತು. ಇಲ್ಲಿ ಸುಮಾರು13 ಹಿಟಾಚಿಗಳು, ಕಾರ್ಮಿಕರು ಕಾರ್ಯನಿರತರಾಗಿದ್ದರು. ತೆರವು ಸೋಮವಾರ ಮುಗಿದಿದ್ದು, ಅಂದು ಒಂದು ಸರಕು ರೈಲು ಪರೀಕ್ಷಾರ್ಥ ಮಂಗಳೂರಿನಿಂದ ಸಕಲೇಶಪುರ ತನಕ ಸಂಚರಿಸಿದೆ. ಮಂಗಳವಾರ ಸಕಲೇಶಪುರ ಭಾಗದಿಂದ ಎರಡು ಗೂಡ್ಸ್ ರೈಲುಗಳು ಸಂಚರಿಸಿವೆ. ಬುಧವಾರದಿಂದ ಗೂಡ್ಸ್ ರೈಲುಗಳು ನಿರಂತರ ಓಡಾಟ ನಡೆಸಲಿದ್ದು, ವಾರದೊಳಗೆ ಪ್ಯಾಸೆಂಜರ್ ರೈಲು ಓಡಾಟಕ್ಕೂ ಮುಕ್ತವಾಗುವ ಸಾಧ್ಯತೆ ಇದೆ.
ತೆರವು ಕಾರ್ಯ ನಡೆದಿದ್ದರೂ ಕೆಲವು ಕಡೆ ಗುಡ್ಡ ಜರಿಯುವ ಸಾಧ್ಯತೆ ಕುರಿತು ಮುನ್ನೆಚ್ಚರಿಕೆ ವಹಿಸಬೇಕಿದೆ. ನೈಋತ್ಯ ರೈಲ್ವೇಯ ಉನ್ನತ ಅಧಿಕಾರಿಗಳ ತಂಡ ಮಾರ್ಗ ಪರಿಶೀಲಿಸಿದ್ದು, ತಾಂತ್ರಿಕ ಸುರಕ್ಷಾ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಳಿಯ ಗುಣಮಟ್ಟ ಖಚಿತಪಡಿಸಿದ ಬಳಿಕ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ಸೆ. 30ರಿಂದ ರೈಲು ಓಡಾಟ ಸ್ಥಗಿತಗೊಂಡಿತ್ತು. ಅ. 10ರ ತನಕ ನಿಷೇಧ ಆದೇಶ ಜಾರಿಯಲ್ಲಿದೆ. ಕಾಮಗಾರಿ ಮುಗಿದು ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದರೂ ಅ.10ರ ಬಳಿಕವೇ ಪ್ಯಾಸೆಂಜರ್ ರೈಲು ಓಡಾಟಕ್ಕೆ ನೈಋತ್ಯ ರೈಲ್ವೇ ಅನುಮತಿ ನೀಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ