ಸಂಪಾಜೆ -ಮಡಿಕೇರಿ ನಡುವೆ ವಾಹನ ಸಂಚಾರ ಆರಂಭ
Team Udayavani, Nov 19, 2018, 9:45 AM IST
ಸುಳ್ಯ: ಸಂಪಾಜೆ-ಮಡಿಕೇರಿ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರದಿಂದ ಕೆಎಸ್ಆರ್ಟಿಸಿ ಬಸ್ ಸಹಿತ ಬಹುತೇಕ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಎಲ್ಸಿವಿಗಿಂತ ಅಧಿಕ ಸಾಮರ್ಥ್ಯದ ಎಲ್ಲ ರೀತಿಯ ಘನ ವಾಹನಗಳ ಪ್ರವೇಶಕ್ಕೆ ನಿಷೇಧ ಮುಂದುವರಿಯಲಿದೆ.
ಪ್ರಾಕೃತಿಕ ಅವಘಡದ ಬಳಿಕ ಆ. 8ರಂದು ಉಭಯ ಜಿಲ್ಲಾಡಳಿತಗಳು ಎಲ್ಲ ಬಗೆಯ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದವು. ಅನಂತರ ಲಘು ವಾಹನ ಸಂಚಾರ ಆರಂಭಿಸಿದ್ದರೂ ಮತ್ತೆ ನಿಷೇಧಿಸಲಾಗಿತ್ತು. ತಿಂಗಳ ಹಿಂದೆ ತಾತ್ಕಾಲಿಕ ದುರಸ್ತಿ ಪೂರ್ಣಗೊಂಡು ಅಧಿಕೃತವಲ್ಲದೆ ಲಘು ವಾಹನಗಳು ಸಂಚರಿಸುತ್ತಿದ್ದವು.
ಹೆದ್ದಾರಿ ಪೂರ್ಣ ಅಲ್ಲ
ಸಂಪಾಜೆ-ಮಡಿಕೇರಿ ನಡುವೆ ವಾಹನ ಓಡಾಟ ಮುಂದಿನ ಆದೇಶದ ತನಕ ಇರಲಿದೆ ಎಂದು ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಲಾಗಿದೆ. ರಸ್ತೆಯಲ್ಲಿ ಭಾಗಶಃ ದುರಸ್ತಿ ಮತ್ತು ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲ ಬಗೆಯ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಹಿಂದಿನ ನಿರ್ಬಂಧ ಆದೇಶದಲ್ಲಿ ಭಾಗಶಃ ಮಾರ್ಪಾಟು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಓಡಾಟ ಆರಂಭ
ಜಿಲ್ಲಾಡಳಿತದ ಅನುಮೋದನೆಯಿಂದ ಶೇ.70ರಷ್ಟು ಬಸ್ ಓಡಾಟ ರವಿವಾರದಿಂದಲೇ ಆರಂಭಗೊಂಡಿದೆ. ಸೋಮವಾರದೊಳಗೆ ಎಲ್ಲ ಬಸ್ಗಳು ಸಂಚರಿಸಲಿವೆ ಎಂದು ಸುಳ್ಯ ಕೆಎಸ್ಆರ್ಟಿಸಿ ಘಟಕದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಉದಯವಾಣಿ ವರದಿ
ರಸ್ತೆಯಲ್ಲಿ ರಾತ್ರಿ ವೇಳೆ ಘನ ವಾಹನಗಳು ಸಂಚರಿಸುತ್ತಿದ್ದರೂ ಸರಕಾರಿ ಬಸ್ ಮತ್ತು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡದ ಬಗ್ಗೆ ಹಾಗೂ ಹೆದ್ದಾರಿ ಪೂರ್ಣಗೊಳ್ಳುವ ಮೊದಲೇ ಸುಳ್ಯ-ಕರಿಕೆ-ಭಾಗಮಂಡಲ- ಮಡಿಕೇರಿ ಪರ್ಯಾಯ ರಸ್ತೆಯಲ್ಲಿ ಮಿನಿ ಬಸ್ ಓಡಾಟ ರದ್ದುಗೊಳಿಸಿರುವುದರಿಂದ ಜನರಿಗೆ ತೊಂದರೆ ಉಂಟಾಗಿರುವ ಕುರಿತು “ಉದಯವಾಣಿ’ ಸತತ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್