ಕ್ರಿಕೆಟಿಗ ಪರ್ವಿಂದರ್ ಮೇಲೆ ದಾಳಿ
Team Udayavani, Jul 22, 2017, 9:50 AM IST
ನವದೆಹಲಿ: ಕ್ರಿಕೆಟಿಗ ಪರ್ವಿಂದರ್ ಅವಾನ ಮೇಲೆ ಐವರು ದುಷ್ಕರ್ಮಿಗಳ ತಂಡವೊಂದು ನವದೆಹಲಿಯ ಗ್ರೇಟ್ ನೋಯ್ಡಾದಲ್ಲಿ ದಾಳಿ ನಡೆಸಿದೆ. ಈ ಘಟನೆ ಶುಕ್ರವಾರ ನಡೆದಿದೆ. ಘಟನೆ ವೇಳೆ ಪರ್ವಿಂದರ್ ಮಹೀಂದ್ರಾ ಎಸ್ಯುವಿ ಕಾರು ಚಲಾಯಿಸುತ್ತಿದ್ದರು
ಎನ್ನಲಾಗಿದೆ. ದಾಳಿಯಿಂದ ಅವರ ಕಾರಿಗೆ ತೀವ್ರ ಹಾನಿಯಾಗಿದೆ. ಘಟನೆಗೆ ನಿಖರವಾದ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತಂತೆ ಪರ್ವಿಂದರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ತನಿಖೆ ಆರಂಭವಾಗಿದೆ ಎಂದು ಆಂಗ್ಲ
ಪತ್ರಿಕೆಯೊಂದು ವರದಿ ಮಾಡಿದೆ.
ಪರ್ವಿಂದರ್ 2012ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಟಿ20 ಪಂದ್ಯದ ವೇಳೆ ಭಾರತ ಪರ ಆಡಿದ್ದರು. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು. 2007ರಲ್ಲಿ ಇವರು ತಮ್ಮ ಕ್ರಿಕೆಟ್ ಜೀವನವನ್ನು ಹಿಮಾಚಲ ಪ್ರದೇಶ ಪರ ದೇಶೀಯ ಪಂದ್ಯ ಆಡುವ ಮೂಲಕ ಆರಂಭಿಸಿದ್ದರು. 62 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 191 ವಿಕೆಟ್ ಕಬಳಿಸಿದ್ದಾರೆ.