ಎನ್ಸಿಎ ಬಗ್ಗೆ ಟೀಕೆ ಸಲ್ಲದು: ಯುವರಾಜ್ ಸಿಂಗ್
Team Udayavani, Jul 22, 2018, 10:25 AM IST
ಬೆಂಗಳೂರು: ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಗಾಯದಿಂದ ಚೇತರಿಸಿಕೊಳ್ಳದ ಬೆನ್ನಲ್ಲೇ ಕೆಲವು ಮಾಧ್ಯಮಗಳು ಎನ್ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಬಗ್ಗೆ ವ್ಯಾಪಕ ಟೀಕೆ ಮಾಡಿದ್ದವು. ಮಾಧ್ಯಮಗಳ ಆರೋಪವನ್ನು ಎಡಗೈ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ತಳ್ಳಿ ಹಾಕಿದ್ದಾರೆ.
“ಬಿಸಿಸಿಐ ನುರಿತ ತರಬೇತಿದಾರರು, ಫಿಸಿಯೋಗಳಿಂದ ಆಟಗಾರರು ಗಾಯದಿಂದ ಚೇತರಿಸಿಕೊಳ್ಳಲು ಅಗತ್ಯವಾದ ಕ್ರಮ ತೆಗೆದುಕೊಳ್ಳುತ್ತಿದೆ. ನಾನು ಕ್ಯಾನ್ಸರ್ಗೆ ತುತ್ತಾದ ಬಳಿಕ ಇಲ್ಲಿಂದಲೇ ಚೇತರಿಕೆ ಕಂಡಿದ್ದೇನೆ. ಬಿಸಿಸಿಐ ಸಹಾಯದಿಂದ ಇದೆಲ್ಲ ಸಾಧ್ಯವಾಗಿದೆ. ಮಾಧ್ಯಮಗಳ ಹೇಳಿಕೆ ಸರಿಯಲ್ಲ’ ಎಂದು ಯುವರಾಜ್ ಸಿಂಗ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.