ಫ‌ುಟ್‌ಬಾಲ್‌ ತಂಡಗಳ ಮ್ಯಾನೇಜರ್‌ಗಳಿಗೂ ರೆಡ್‌ಕಾರ್ಡ್‌!


Team Udayavani, Aug 2, 2018, 12:10 PM IST

red-card.jpg

ಲಂಡನ್‌: ಮೈದಾನದಲ್ಲಿ ದುರ್ವರ್ತನೆ ತೋರುವ ಆಟಗಾರರಿಗೆ ರೆಡ್‌ ಕಾರ್ಡ್‌ ನೀಡುವುದನ್ನು ಕಂಡಿದ್ದೇವೆ. ಇನ್ನು ಮುಂದೆ, ಮೈದಾನದ ಅಂಚಿನಲ್ಲಿ ನಿಂತು ಆಟಗಾರರಿಗಿಂತಲೂ ಕೆಟ್ಟದಾಗಿ ವರ್ತಿಸುವ ತಂಡಗಳ ಮ್ಯಾನೇಜರ್‌ಗಳನ್ನೂ ದಂಡಿಸಲು ಫ‌ುಟ್‌ಬಾಲ್‌ ಒಕ್ಕೂಟ ತೀರ್ಮಾನಿಸಿದೆ. ಇನ್ನು ಮುಂದೆ ಪ್ರೀಮಿಯರ್‌ ಲೀಗ್‌ ಹೊರತುಪಡಿಸಿ ಇಂಗ್ಲೆಂಡ್‌ನ‌ ವೃತ್ತಿಪರ ಫ‌ುಟ್‌ಬಾಲ್‌ ಪಂದ್ಯಾವಳಿಗಳಲ್ಲಿ ರೆಫ್ರಿಗಳು ತಂಡಗಳ ಕೋಚಿಂಗ್‌ ಸಿಬಂದಿಗೂ ಹಳದಿ ಹಾಗೂ ಕೆಂಪು ಕಾರ್ಡ್‌ ಪ್ರದರ್ಶಿಸಲು ಅವಕಾಶವಿರಲಿದೆ. ಮ್ಯಾನೇಜರ್‌ಗಳಿಗೆ ವಾಗ್ಧಂಡನೆ ವಿಧಿಸುವ ಪ್ರಸ್ತಾವವೂ ಇದೆ. ಆಟಗಾರರಂತೆ, ಇವರಿಗೂ ಪಂದ್ಯಗಳ ನಿಷೇಧವನ್ನೂ ಹೇರಲಾಗುತ್ತದೆ. 

ಎಲ್ಲವೂ ಉತ್ತಮ ನಡತೆಗಾಗಿ
ಪ್ರೀಮಿಯರ್‌ ಲೀಗ್‌ನ ಕೆಳಗೆ ಮೂರು ಹಂತಗಳ ಪಂದ್ಯಗಳನ್ನು ಆಯೋಜಿಸುವ ಇಂಗ್ಲಿಷ್‌ ಫ‌ುಟ್‌ಬಾಲ್‌ ಲೀಗ್‌ನ ಮುಖ್ಯ ಕಾರ್ಯ ನಿರ್ವಾಹಕ ಶಾನ್‌ ಹಾರ್ವೆ, “ಡಗ್‌ಔಟ್‌ ಅಥವಾ ತಾಂತ್ರಿಕ ವಲಯದಲ್ಲಿ ನಡತೆಯ ನಿಯಮಗಳೇನೂ ಹೊಸತಲ್ಲ. ಅಭಿಮಾನಿಗಳಿಗೆ ಶಿಸ್ತಿನ ವಿಧಾನಗಳನ್ನು ಸ್ಪಷ್ಟಪಡಿಸುವುದು ಹಾಗೂ ಮೈದಾನದಲ್ಲಿ ಉತ್ತಮ ನಡತೆಯನ್ನು ಉದ್ದೀಪಿಸುವುದು ನಮ್ಮ ಉದ್ದೇಶ. ತಂಡದ ಸಿಬಂದಿ ದುರ್ವರ್ತನೆ ತೋರಿದಾಗ ರೆಡ್‌ ಕಾರ್ಡ್‌ ತೋರಿಸಬಹುದು. ಅಗತ್ಯಬಿದ್ದರೆ ತಂಡದ ಎಲ್ಲ ಸಿಬಂದಿಗೂ ಎಚ್ಚರಿಕೆ ನೀಡುವ ಅಧಿಕಾರ ರೆಫ್ರಿಗಳಿಗಿರುತ್ತದೆ…’ ಎಂದು ಹೇಳಿದರು.

ಹೀಗಿದೆ ಹೊಸ ನಿಯಮ…
ಪಂದ್ಯದ ಅಧಿಕಾರಿಗಳ ನಿರ್ಧಾರಗಳನ್ನು ಪ್ರಭಾವಿಸಬಲ್ಲ ಅಸಂಬದ್ಧ ಭಾಷೆ ಹಾಗೂ ಸನ್ನೆಗಳಿಗೆ ಮೊದಲ ಹಂತದ ಎಚ್ಚರಿಕೆ ನೀಡಲಾಗುವುದು. ನೀರಿನ ಬಾಟಲಿಗಳನ್ನು ಎಸೆಯುವುದು, ಒದೆಯುವುದು, ಬಟ್ಟೆ ಎಸೆಯುವುದು, ಕಿರಿಕಿರಿ ಹುಟ್ಟಿಸುವಂತೆ ಚಪ್ಪಾಳೆ ತಟ್ಟುವುದು ಅಥವಾ ಫ‌ಲಕಗಳನ್ನು ಪ್ರದರ್ಶಿಸುವುದೂ ದಂಡನೆಗೆ ಅರ್ಹ ವಾಗಿರುತ್ತವೆ. ಇಂತಹ 4 ಎಚ್ಚರಿಕೆಗಳನ್ನು ಸ್ವೀಕರಿಸುವ ಸಿಬಂದಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. 8 ಎಚ್ಚರಿಕೆಗಳಿಗೆ ಎರಡು, 12 ಎಚ್ಚರಿಕೆಗಳಿಗೆ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. 16 ಎಚ್ಚರಿಕೆಗಳನ್ನು ಸ್ವೀಕರಿಸಿದರೆ ದುರ್ನಡತೆಯ ಆರೋಪ ಹೊರಿಸಲಾಗುತ್ತದೆ. ಆಟಗಾರರಿಗೆ ನಿರ್ದಿಷ್ಟ ಪಂದ್ಯಗಳ ಬಳಿಕ ಕಾರ್ಡ್‌ಗಳನ್ನು ಕಳೆಯಲಾಗುತ್ತದೆ. ಆದರೆ, ಕೋಚಿಂಗ್‌ ಸಿಬಂದಿಗೆ ನೀಡಿದ ಎಚ್ಚರಿಕೆ ವಾಪಸ್‌ ಪಡೆಯುವುದಿಲ್ಲ.

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.