ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿ: ಸಿಂಧು ಸೆಮಿಗೆ; ಪದಕ ಖಾತ್ರಿ
Team Udayavani, Aug 4, 2018, 6:00 AM IST
ನಾಂಜಿಂಗ್ (ಚೀನ): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಪದಕವೊಂದನ್ನು ಖಚಿತಪಡಿಸಿದ್ದಾರೆ. ಭಾರತದ ಪಾಲಿಗೆ ಸೋಲಿನ ದಿನವಾಗಿದ್ದ ಶುಕ್ರವಾರದ ಕೊನೆಯಲ್ಲಿ ಈ ಕಂಟಕವನ್ನು ನಿವಾರಿಸಿದ ಸಿಂಧು ವನಿತಾ ಸಿಂಗಲ್ಸ್ ಸೆಮಿಫೈನಲ್ಗೆ ಲಗ್ಗೆ ಇರಿಸಿದ್ದಾರೆ. ಇದರಿಂದ ಕನಿಷ್ಠ ಕಂಚಿನ ಪದಕವೊಂದು ಈ ಆಟಗಾರ್ತಿಯ ಕೊರಳನ್ನು ಅಲಂಕರಿಸಲಿದೆ.
ಶುಕ್ರವಾರದ ಪಂದ್ಯಗಳಲ್ಲಿ ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಬಿ. ಸಾಯಿ ಪ್ರಣೀತ್… ಇವರೆಲ್ಲ ಸೋತು ಭಾರತದ ಪಾಳೆಯದಲ್ಲಿ ಹತಾಶ ವಾತಾವರಣ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಆಶಾಕಿರಣವಾಗಿ ಮೂಡಿಬಂದ ಸಿಂಧು ಜಪಾನಿನ ನಜೋಮಿ ಒಕುಹರಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿ 21-17, 21-19 ಅಂತರದ ರೋಮಾಂಚಕ ಗೆಲುವನ್ನು ಒಲಿಸಿಕೊಂಡರು. ಎರಡೂ ಗೇಮ್ಗಳಲ್ಲಿ ಆರಂಭಿಕ ಹಿನ್ನಡೆ ಕಂಡರೂ ಎದೆಗುಂದದೆ ಆಡಿ ಸೆಮಿಫೈನಲ್ಗೆ ಮುನ್ನುಗ್ಗುವಲ್ಲಿ ಯಶಸ್ವಿಯಾದರು.
ಪಿ.ವಿ. ಸಿಂಧು ಈವರೆಗೆ 2013, 2014ರಲ್ಲಿ ಕಂಚಿನ ಪದಕ, 2017ರಲ್ಲಿ ಬೆಳ್ಳಿ ಪದಕ ಗೆದ್ದು ವಿಶ್ವ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಶನಿವಾರದ ಸೆಮಿಫೈನಲ್ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ ಆಡಲಿದ್ದಾರೆ.
ಸೈನಾ, ಅಶ್ವಿನಿ-ಸಾತ್ವಿಕ್ ನಿರ್ಗಮನ
ಶುಕ್ರವಾರ ಬೆಳಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ 2 ಬಾರಿಯ ಚಾಂಪಿಯನ್ ಕ್ಯಾರೋಲಿನಾ ಮರಿನ್ಗೆ ಶರಣಾಗಿ ಹೊರಬಿದ್ದರು. ರಿಯೋ ಒಲಿಂಪಿಕ್ ಚಾಂಪಿಯನ್ ಕೂಟ ಆಗಿರುವ ಸ್ಪೇನಿನ ಮರಿನ್ 21-6, 21-11 ಅಂತರದಿಂದ ಸೈನಾಗೆ ಸೋಲುಣಿಸಿದರು.
ಮಿಶ್ರ ಡಬಲ್ಸ್ನಲ್ಲಿ ಅಶ್ವಿನ್ ಪೊನ್ನಪ್ಪ-ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಆಟ ಕೂಡ ಕ್ವಾರ್ಟರ್ ಫೈನಲ್ನಲ್ಲೇ ಕೊನೆಗೊಂಡಿತು. ಚೀನೀ ಜೋಡಿಯಾದ ಜೆಂಗ್ ಸಿವೀ-ಹ್ವಾಂಗ್ ಯಾಕಿಯೋಂಗ್ 21-17, 21-10 ನೇರ ಗೇಮ್ಗಳಲ್ಲಿ ಭಾರತೀಯರನ್ನು ಹಿಮ್ಮೆಟ್ಟಿಸಿತು.
ಸಾಯಿ ಪ್ರಣಿತ್ಗೆ ಸೋಲು
ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಬಿ. ಸಾಯಿ ಪ್ರಣೀತ್ ಕೂಡ ಸೋಲನುಭವಿಸಿದರು. ಜಪಾನಿನ ಕೆಂಟೊ ಮೊಮೊಟ ವಿರುದ್ಧ ನಡೆದ ಪಂದ್ಯವನ್ನು ಪ್ರಣೀತ್ 21-21, 21-21ರಿಂದ ಕಳೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ