ಮಣಿಂದರ್ ಮಿಂಚಿನಾಟ; ಬಂಗಾಲ್ಗೆ ಗೆಲುವು
Team Udayavani, Oct 17, 2018, 8:10 AM IST
ಸೋನೆಪತ್ (ಹರ್ಯಾಣ): ಪ್ರೊ ಕಬಡ್ಡಿ 6ನೇ ಆವೃತ್ತಿ ಹರ್ಯಾಣ ಚರಣದ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬಂಗಾಲ್ ವಾರಿಯರ್ 30-25 ಅಂತರದಿಂದ ಗೆಲುವು ಸಾಧಿಸಿದೆ. ಇದು ಒಟ್ಟಾರೆ ಕೂಟದಲ್ಲಿ ಬಂಗಾಲ್ ವಾರಿಯರ್ ಸಾಧಿಸಿದ 2ನೇ ಗೆಲುವು. ಈ ಹಿಂದಿನ ಪಂದ್ಯದಲ್ಲಿ ಬಂಗಾಲ್ ವಾರಿಯರ್ ತಂಡವು 27-36 ಅಂಕದಿಂದ ತಮಿಳ್ ತಲೈವಾಸ್ ವಿರುದ್ಧ ಗೆಲುವು ಸಾಧಿಸಿತ್ತು.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ ತಂಡವು ಆತಿಥೇಯ ಹರ್ಯಾಣ ಸ್ಟೀಲರ್ ತಂಡವನ್ನು 36-33 ಅಂಕಗಳಿಂದ ಕೆಡಹಿತು. ಹರ್ಯಾಣದ ನವೀನ್ ರೈಡಿಂಗ್ನಲ್ಲಿ ಗರಿಷ್ಠ 15 ಅಂಕ ಗಳಿಸಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಜೈಪುರದ ನಿತಿನ್ ರಾವಲ್ 16 ರೈಡಿಂಗ್ನಲ್ಲಿ 8 ಅಂಕ ಸಂಪಾದಿಸಿ ತಂಡದ ಗೆಲುವಿಗೆ ಕೊಡುಗೆ ಸಲ್ಲಿಸಿದರು.
ತೆಲುಗು ಟೈಟಾನ್ಸ್ ತಂಡಕ್ಕೆ ಕೂಟದಲ್ಲಿ ಎದುರಾದ ಮೊದಲ ಸೋಲು. ಟೈಟಾನ್ಸ್ ಚೆನ್ನೈ ಚರಣದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 28-33 ಅಂಕಗಳ ಅಂತರದಿಂದ ಗೆಲುವು ಸಾಧಿಸಿತ್ತು. ಹರ್ಯಾಣ ಚರಣದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ 34-29 ಅಂತರದಿಂದ ಜಯ ಸಾಧಿಸಿತ್ತು. ಆದರೆ ಬಂಗಾಲ್ ವಾರಿಯರ್ ವಿರುದ್ಧ ತೆಲುಗು ಟೈಟಾನ್ಸ್ ಆಟ ನಡೆಯಲಿಲ್ಲ.
ಮಣಿಂದರ್ ಜಾದೂ: ಬಂಗಾಲ್ ವಾರಿಯರ್ ಗೆಲುವಿಗೆ ಪ್ರಮುಖ ಕಾರಣ ಮಣಿಂದರ್ ಸಿಂಗ್ ರೈಡಿಂಗ್. ಮಿಂಚಿನಂತೆ ದಾಳಿ ನಡೆಸಿದ ಅವರು ತೆಲುಗು ಟೈಟಾನ್ಸ್ ಕೋಟೆಯನ್ನು ನುಚ್ಚುನೂರು ಮಾಡಿದರಲ್ಲದೆ ತಂಡಕ್ಕೆ ಅಗತ್ಯವಿದ್ದ ಅತ್ಯಮೂಲ್ಯ 11 ರೈಡಿಂಗ್ ಅಂಕವನ್ನು ತಂದುಕೊಟ್ಟರು. ಅವರ ಒಟ್ಟಾರೆ ರೈಡಿಂಗ್ನಲ್ಲಿ 7 ಟಚ್ ಪಾಯಿಂಟ್ ಹಾಗೂ 4 ಬೋನಸ್ ಅಂಕ ಇತ್ತು. ಇವರನ್ನು ಹೊರತುಪಡಿಸಿದಂತೆ ಶ್ರೀಕಾಂತ್ ಟೆವಾಟಿಯ (4 ಅಂಕ), ಮಹೇಶ್ (3 ಅಂಕ) ತಂಡಕ್ಕೆ ನೆರವು ನೀಡಿ ಗೆಲುವಿನ ದಡ ಸೇರಿಸಿದರು.
ನಿಲೇಶ್ ಏಕಾಂಗಿ ಹೋರಾಟ
ರೈಡರ್ ನಿಲೇಶ್ ಸಾಳುಂಕೆ (6 ಅಂಕ) ರೈಡಿಂಗ್ನಲ್ಲಿ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಇವರನ್ನು ಹೊರತುಪಡಿಸಿದಂತೆ ವಿಶಾಲ್ ಭಾರಧ್ವಾಜ್ (4 ಅಂಕ), ಅಬೋಜರ್ (5 ಅಂಕ) ಟ್ಯಾಕಲ್ನಲ್ಲಿ ಮಿಂಚಿದರೂ ರೈಡಿಂಗ್ನಲ್ಲಿ ಒಂದೊಳ್ಳೆ ಆಟ ಹೊರಹೊಮ್ಮದ್ದು ಟೈಟಾನ್ಸ್ ಸೋಲಿಗೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು