ಅಂಪೈರ್ ವಿರುದ್ಧ ಮೈದಾನದಲ್ಲೇ ಸಿಟ್ಟಾದ ಗಂಭೀರ್
Team Udayavani, Nov 13, 2018, 6:35 AM IST
ದೆಹಲಿ: ದೆಹಲಿ ಮತ್ತು ಹಿಮಾಚಲಪ್ರದೇಶದ ನಡುವಿನ ಪಂದ್ಯದಲ್ಲಿ ವಿವಾದವೊಂದು ನಡೆಯಿತು. ಭಾರತ ಕ್ರಿಕೆಟ್ ಮಾಜಿ ಉಪನಾಯಕ ಗೌತಮ್ ಗಂಭೀರ್ ತಪ್ಪು ತೀರ್ಪು ಕೊಟ್ಟ ಅಂಪೈರ್ ವಿರುದ್ಧ ಮೈದಾನದಲ್ಲೇ ಸಿಟ್ಟಾದರು.
ದೆಹಲಿ ಬ್ಯಾಟ್ಸ್ಮನ್ ಗಂಭೀರ್ 44 ರನ್ ಗಳಿಸಿದ್ದಾಗ ಮಾಯಾಂಕ್ ದಾಗರ್ ಎಸೆತದಲ್ಲಿ ಚೆಂಡು ಅವರ ಭುಜಕ್ಕೆ ಬಡಿದಿತ್ತು. ಮೇಲಕ್ಕೆ ಎಗರಿದ್ದ ಚೆಂಡು ಕ್ಷೇತ್ರರಕ್ಷಕನ ಕೈಸೇರಿತ್ತು. ಆ ವೇಳೆ ಕ್ಷೇತ್ರರಕ್ಷಕ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಂಪೈರ್ ಔಟ್ ಹೌದೋ ಅಲ್ಲವೋ ಎಂದು ಪರಿಶೀಲಿಸದೇ ನೇರವಾಗಿ ಔಟ್ ತೀರ್ಪು ನೀಡಿದರು. ಇದರಿಂದ ಸಿಟ್ಟಾದ ಗಂಭೀರ್ ಚೆಂಡು ಭುಜಕ್ಕೆ ಬಡಿದಿದ್ದು ಎಂದು ಆಕ್ರೋಶದಲ್ಲೇ ಅಂಪೈರ್ಗೆ ಸನ್ನೆ ಮಾಡಿ ತೋರುತ್ತಾ ಹೊರ ನಡೆದರು.