ಸಿಂಧು ಪರಾಭವ, ಶ್ರೀಕಾಂತ್ ಮುನ್ನಡೆ
Team Udayavani, Nov 16, 2018, 6:55 AM IST
ಹಾಂಕಾಂಗ್: ವಿಶ್ವ ಬ್ಯಾಡ್ಮಿಂಟನ್ ತಾರಯಾಗಿ ಮಿಂಚಿದ ಪಿ.ವಿ. ಸಿಂಧು ನಿಧಾನಕ್ಕೆ ತಮ್ಮ ಹಿಡಿತ ಕಳೆದುಕೊಳ್ಳುತ್ತಿರುವಂತೆ ತೋರುತ್ತದೆ. ಇದಕ್ಕೆ ತಾಜಾ ಉದಾಹರಣೆ ಹಾಂಕಾಂಗ್ ಮುಕ್ತ ಬ್ಯಾಡ್ಮಿಂಟನ್ನಲ್ಲಿ ದ.ಕೊರಿಯಾದ ಸಂಗ್ ಜಿ ಹ್ಯೂನ್ ವಿರುದ್ಧ ಅನುಭವಿಸಿದ ಸೋಲು.
ಗುರುವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.10ನೇ ಆಟಗಾರ್ತಿ ಸಂಗ್ ವಿರುದ್ಧ ಭಾರೀ ಪೈಪೋಟಿ ನೀಡಿದರೂ ಸಿಂಧು 24-26, 22-20ರ ನೇರ ಗೇಮ್ಗಳಿಂದ ಸೋತು ಹೋದರು. ಅವರು ಇತ್ತೀಚೆಗೆ ಯಾವುದೇ ಅಂತಾರಾಷ್ಟ್ರೀಯ ಕೂಟ ಗೆದ್ದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಸೋತರೂ ಸಿಂಧು ಭಾರೀ ಪೈಪೋಟಿ ನೀಡಿದರು. ಮೊದಲ ಗೇಮ್ ನಿಗದಿತ ಮಿತಿ ಮೀರಿ 24-26ರ ವರೆಗೆ ಮುಂದುವರಿಯಿತು. 2ನೇ ಗೇಮ್ ಕೂಡ ನಿಗದಿತ ಮಿತಿ ಮೀರಿ 20-22ರ ವರೆಗೆ ಹೋಯಿತು. ದೀರ್ಘ ಹೋರಾಟ ನಡೆಸಿದರೂ ಸಿಂಧು ಪಂದ್ಯವನ್ನು ಗೆಲ್ಲಲಾಗದೇ ಹತಾಶರಾದರು.
ಪಿ.ವಿ.ಸಿಂಧು ಸೋತ ನೋವು ಒಂದು ಕಡೆಯಿದ್ದರೂ ಮತ್ತೂಂದು ಕಡೆ ಪುರುಷರ ಸಿಂಗಲ್ಸ್ನಲ್ಲಿ ಕೆ.ಶ್ರೀಕಾಂತ್ ಗೆದ್ದು ಕ್ವಾರ್ಟರ್ ಫೈನಲ್ಗೇರಿದ್ದು ಸಂತಸದ ಸುದ್ದಿ. ಅವರು ಭಾರತದವರೇ ಆದ ಎಚ್.ಎಸ್. ಪ್ರಣಯ್ ವಿರುದ್ಧ ಜಿದ್ದಾಜಿದ್ದಿನ ಕಾದಾಟ ನಡೆಸಿ 18-21, 30-29, 21-18ರಿಂದ ಗೆಲುವು ಸಾಧಿಸಿದರು. ಈ ಪಂದ್ಯವೂ ದೀರ್ಘ ಕಾದಾಟಕ್ಕೆ ಕಾರಣವಾಗಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು. ಇದುವರೆಗೆ ಶ್ರೀಕಾಂತ್, ಪ್ರಣಯ್ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ರಾಂಕಿರೆಡ್ಡಿ-ಅಶ್ವಿನಿ ಪೊನ್ನಪ್ಪ ಸೋತು ಹೊರಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?