ಬೆಂಗಾಲ್ ವಿರುದ್ಧ ಹರ್ಯಾಣಕ್ಕೆ ಜಯ
Team Udayavani, Dec 6, 2018, 6:15 AM IST
ನವದೆಹಲಿ: 6ನೇ ಆವೃತ್ತಿ ಪ್ರೊ ಕಬಡ್ಡಿ ದೆಹಲಿ ಚರಣದಲ್ಲಿ ಬುಧವಾರ ನಡೆದ ಅಂತರ್ವಲಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ 35-33 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ.
ಈ ಜಯದ ಮೂಲಕ ಎ ಗುಂಪಿನಲ್ಲಿರುವ ಹರ್ಯಾಣ ಸ್ಥಿತಿ ತುಸು ಸುಧಾರಿಸಿದೆ. ಬಿ ಗುಂಪಿನಲ್ಲಿರುವ ಬೆಂಗಾಲ್ ಯಥಾಸ್ಥಾನ ಕಾಪಾಡಿಕೊಂಡಿದೆ. ಒಟ್ಟಾರೆ ಹೋಲಿಸಿದರೆ ಹರ್ಯಾಣಕ್ಕಿಂತ ಬೆಂಗಾಲ್ ಉತ್ತಮ ಸ್ಥಿತಿಯಲ್ಲಿದೆ.
ಹರ್ಯಾಣ ಪರ ದಾಳಿಯಲ್ಲಿ ಖ್ಯಾತ ಆಟಗಾರ ಮೋನು ಗೋಯತ್ ಮಿಂಚಿದರು. ಆದರೆ ಅವರ ಎಂದಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಈ ಪ್ರದರ್ಶನ ಅದ್ಭುತವೇನಲ್ಲ ಎಂದು ಖಚಿತವಾಗಿ ಹೇಳಬಹುದು. ಮೋನು 25 ಬಾರಿ ಬೆಂಗಾಲ್ ಕೋಟೆಗೆ ದಾಳಿಯಿಟ್ಟು, 12 ಬಾರಿ ಯಶಸ್ಸು ಸಾಧಿಸಿದರು. 8 ಬಾರಿಎದುರಾಳಿಗಳನ್ನು ಔಟ್ ಮಾಡಿದರೆ,ಇನ್ನು 4 ಬೋನಸ್ ಅಂಕ ಅವರಿಗೆ ಲಭಿಸಿತು. ರಕ್ಷಣಾ ವಿಭಾಗದಲ್ಲಿ ಹರ್ಯಾಣ ಸಾಧನೆ ಪರವಾಗಿಲ್ಲ ಎನ್ನುವ ಮಟ್ಟದಲ್ಲೇ ಇದೆ. ಇದರ ನಡುವೆಯೇ ಆ ತಂಡ ಗೆದ್ದಿದೆ ಅಚ್ಚರಿ ಮೂಡಿಸಿದೆ.
ಸೋತ ಬೆಂಗಾಲ್ ಪರ ಮಣಿಂದರ್ ಸಿಂಗ್ ಹಾಗೂ ರವೀಂದ್ರ ಕುಮಾವತ್ ಮಿಂಚಿದರು. ಮಣಿಂದರ್ ಸಿಂಗ್ 18 ಬಾರಿ ದಾಳಿ ನಡೆಸಿ 11 ಅಂಕ ಗಳಿಸಿದರು. ಇವರ ನೆರವಿಗೆ ನಿಂತ ರವೀಂದ್ರ 7 ಅಂಕ ಗಳಿಸಿದರು. ಬೆಂಗಾಲ್ ಕೂಡ ರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ