ನೇಪಾಲದೆದುರು ಮುಗ್ಗರಿಸಿದ ಭಾರತ
Team Udayavani, Feb 13, 2019, 12:30 AM IST
ಭುವನೇಶ್ವರ: “ಗೋಲ್ಡ್ ಕಪ್’ ಕೂಟದಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದ ಭಾರತೀಯ ವನಿತಾ ಫುಟ್ಬಾಲ್ ತಂಡ ಸೋಮವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ನೇಪಾಲ ವಿರುದ್ಧ ಸೋಲನುಭವಿಸಿದೆ. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನೇಪಾಲ 2-1 ಗೋಲುಗಳ ಅಂತರದಿಂದ ಭಾರತವನ್ನು ಪರಾಭವಗೊಳಿಸಿದೆ. ನೇಪಾಲ ತಂಡದ ಸಬಿತ್ರಾ 2 ಗೋಲು ಬಾರಿಸಿ ಗೆಲುವಿಗೆ ಕಾರಣರಾದರು. ಭಾರತ ಪರ ರತ್ನಬಾಲಾ ದೇವಿ ಏಕೈಕ ಗೋಲು ಹೊಡೆದರು. ಮೊದಲ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಜಪಾನ್ ತಂಡವನ್ನು ಮಣಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಎಡವಿದ ಭಾರತೀಯ ವನಿತೆಯರು ಶರಣಾಗಿದ್ದಾರೆ.
4ನೇ ನಿಮಿಷದಲ್ಲಿ ಮೊದಲ ಗೋಲು
ಪಂದ್ಯ ಆರಂಭವಾದ 4ನೇ ನಿಮಿಷದಲ್ಲಿ ಸಬಿತ್ರಾ ಗೋಲು ಬಾರಿಸಿ ನೇಪಾಲಕ್ಕೆ ಮುನ್ನಡೆ ತಂದುಕೊಟ್ಟರು. 2 ನಿಮಿಷ ಕಳೆಯುವಷ್ಟರಲ್ಲಿ ಮತ್ತೂಂದು ಗೋಲು ಹೊಡೆದ ಸಬಿತ್ರಾ ಮುನ್ನಡೆಯನ್ನು 2-0ಕ್ಕೇರಿಸಿದರು. ಆ ಬಳಿಕ ರಕ್ಷಣಾತ್ಮಕವಾಗಿ ಆಡಿದ ನೇಪಾಲ ತಂಡ ಭಾರತಕ್ಕೆ ಗೋಲು ಬಾರಿಸುವ ಅವಕಾಶಕ್ಕೆ ತಡೆಯೊಡ್ಡುವಲ್ಲಿ ನಿರತವಾಯಿತು. ಈ ವೇಳೆ ಗೋಲು ಬಾರಿಸಲು ಭಾರತ ಮಾಡಿದ ಹೆಚ್ಚಿನ ಎಲ್ಲ ಪ್ರಯತ್ನಗಳೆಲ್ಲವೂ ವಿಫಲವಾದವು. ಪಂದ್ಯ ಮುಗಿಯುವ ಹಂತದಲ್ಲಿ (83ನೇ ನಿಮಿಷ) ರತ್ನಬಾಲಾ ಗೋಲು ಹೊಡೆಯಲು ಯಶಸ್ವಿಯಾದರು. ಆಬಳಿಕ ಸಮಬಲ ಸಾಧಿಸಲು ಭಾರತೀಯ ವನಿತೆಯರು ಶಕ್ತಿಮೀರಿ ಪ್ರಯತ್ನಿಸಿದರೂ ಯಶಸ್ಸು ಒಲಿಯಲಿಲ್ಲ.
ಗೋಲ್ಡ್ ಕಪ್ ಕೂಟ
ಭಾರತ, ಮ್ಯಾನ್ಮಾರ್, ನೇಪಾಲ ಹಾಗೂ ಇರಾನ್ ದೇಶಗಳನ್ನೊಳಗೊಂಡ “ಗೋಲ್ಡ್ ಕಪ್’ ಕೂಟವನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಕೂಟವನ್ನು ಎಎಫ್ಸಿ 2020 ಒಲಿಂಪಿಕ್ ಕೂಟದ ಅರ್ಹತಾ ಕೂಟಕ್ಕೆ ತಯಾರಿಯಾಗಿ ಆಡಲಾಗುತ್ತಿದೆ. ಈಗಾಗಲೇ 6 ಅಂಕಗಳನ್ನು ಗಳಿಸಿರುವ ಮ್ಯಾನ್ಮಾರ್ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಹಾಗೂ ನೇಪಾಲ ತಂಡಗಳೆರಡೂ 3 ಅಂಕಗಳೊಂದಿಗೆ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇರಾನ್ ಇನ್ನಷ್ಟೇ ಖಾತೆ ತೆರೆಯಬೇಕಾಗಿದೆ. ಅಗ್ರ 2 ತಂಡಗಳು ಫೈನಲ್ಗೆ ಪ್ರವೇಶಿಸಲಿವೆ. ಲೀಗ್ ಹಂತದಲ್ಲಿ ಭಾರತ ತನ್ನ ಕೊನೆಯ ಪಂದ್ಯವನ್ನು ಮ್ಯಾನ್ಮಾರ್ ವಿರುದ್ಧ ಆಡಲಿದೆ. ಈ ಪಂದ್ಯ ಬುಧವಾರ ನಡೆಯಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಇರಾನ್-ನೇಪಾಲ ಮುಖಾಮುಖೀಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್