ಇಂಡಿಯನ್ ವೆಲ್ಸ್ ಟೆನಿಸ್: ಥೀಮ್, ಬಿಯಾಂಕಾ ಚಾಂಪಿಯನ್ಸ್
Team Udayavani, Mar 19, 2019, 12:30 AM IST
ಇಂಡಿಯನ್ ವೆಲ್ಸ್: “ಇಂಡಿಯನ್ ವೆಲ್ಸ್’ ಟೆನಿಸ್ ಕೂಟದ ಫೈನಲ್ನಲ್ಲಿ ಜಯ ಸಾಧಿಸಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಚೊಚ್ಚಲ “ಮಾಸ್ಟರ್ ಪ್ರಶಸ್ತಿ’ಯ ಒಡೆಯನಾಗಿದ್ದಾರೆ. ಇದಕ್ಕೂ ಮೊದಲು ಕೆನಡಾದ ಯುವ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕೂ ವೃತ್ತಿ ಜೀವನದ ಮೊದಲ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.
ಪುರುಷರ ವಿಭಾಗದ ಫೈನಲ್ನಲ್ಲಿ ಥೀಮ್, 5 ಬಾರಿಯ ಇಂಡಿಯನ್ ವೆಲ್ಸ್ ಚಾಂಪಿಯನ್, ಸ್ವಿಜರ್ಲ್ಯಾಂಡಿನ ರೋಜರ್ ಫೆಡರರ್ ವಿರುದ್ಧ 3-6, 6-3, 7-5 ಸೆಟ್ಗಳ ಗೆಲುವು ದಾಖಲಿಸಿದರು. ವನಿತೆಯರ ವಿಭಾಗದ ಪ್ರಶಸ್ತಿ ಕಾದಾಟದಲ್ಲಿ ಬಿಯಾಂಕಾ 3 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್, ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರನ್ನು 6-4, 3-6, 6-4 ಸೆಟ್ಗಳಿಂದ ಸೋಲಿಸಿದರು.
ಫೆಡರರ್ಗೆ ಆಘಾತ
6ನೇ ಇಂಡಿಯನ್ ವೆಲ್ಸ್ ಪ್ರಶಸ್ತಿ ಮತ್ತು 101ನೇ ಜಯದ ನಿರೀಕ್ಷೆಯಲ್ಲಿದ್ದ ಫೆಡರರ್ಗೆ ಥೀಮ್ ಭಾರೀ ಆಘಾತ ನೀಡಿದರು. ಮೊದಲ ಸೆಟ್ ಸುಲಭವಾಗಿ ಜಯಿಸಿದ ಫೆಡರರ್ ಉತ್ತಮ ಲಯದಲ್ಲಿದ್ದಂತೆ ಕಂಡುಬಂದರು. ಆದರೆ ದ್ವಿತೀಯ ಸೆಟ್ನಲ್ಲಿ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ನಿರ್ಣಾಯಕ ಸೆಟ್ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದರೂ ಥೀಮ್ 7-5 ಅಂಕಗಳ ಅಂತರದಿಂದ ಗೆದ್ದು ಮೊದಲ ಎಟಿಪಿ ಮಾಸ್ಟರ್ ಪ್ರಶಸ್ತಿ ಜಯಿಸಿದರು. ಈ ಗೆಲುವಿನಿಂದ ಥೀಮ್ ನೂತನ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನ ಮೇಲಕ್ಕೇರಿ ವೃತ್ತಿಜೀವನದ ಶ್ರೇಷ್ಠ ರ್ಯಾಂಕಿಂಗ್ ಸಂಪಾದಿಸಿದರು (4).
“ನಿಮ್ಮ ವಿರುದ್ಧ ಆಡುವುದು ನನಗೆ ದೊರೆತ ಸೌಭಾಗ್ಯ. ಈ ಆಟದಿಂದ ಅನೇಕ ವಿಷಯಗಳನ್ನು ಕಲಿತೆ. ಟೆನಿಸ್ ದಿಗ್ಗಜರ ಜತೆ ಆಡುವುದು ಖುಷಿ ನೀಡುತ್ತದೆ. ನಿಮಗೆ ಅಭಿನಂದನೆ ತಿಳಿಸುವ ಹಕ್ಕು ನನಗಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ ನನಗಿಂತ ನೀವು 88ಕ್ಕೂ ಹೆಚ್ಚು ಪ್ರಶಸ್ತಿ ಜಯಿಸಿದ್ದೀರಿ. ಹೀಗೆಯೇ ನಿಮ್ಮ ಆಟ ಮುಂದುವರಿಯಲಿ, ಇಂತಹ ಫೈನಲ್ ಪಂದ್ಯಗಳು ನಮ್ಮ ನಡುವೆ ನಡೆಯುತ್ತಿರಲಿ’ ಎಂದು ಥೀಮ್ ಪ್ರಶಸ್ತಿ ಸಮಾರಂಭದಲ್ಲಿ ಫೆಡರರ್ ಬಗ್ಗೆ ಭಾವುಕರಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ