ಬನ್ನೇರುಘಟ್ಟದಲ್ಲಿ ಕಾಡಾನೆ ಹಿಂಡಿನ ದಾಳಿ: ಇಬ್ಬರು CRPF ಯೋಧರು ಸಾವು
Team Udayavani, May 7, 2017, 9:09 AM IST
ಬೆಂಗಳೂರು: ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಕಗ್ಗಲೀಪುರ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಆನೆಗಳ ಹಿಂಡಿನ ದಾಳಿಗೆ ಇಬ್ಬರು ಸಿಆರ್ಪಿಎಫ್ ಯೋಧರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ಯೋಧರು ಹಾವೇರಿ ಮೂಲದ ಪುಟ್ಟಪ್ಪ (35) ಮತ್ತು ತಮಿಳುನಾಡು ಮೂಲದ ಮೂರ್ತಿ (56) ಎಂದು ತಿಳಿದು ಬಂದಿದೆ.
ಮೂರ್ತಿ ಸ್ಥಳದಲ್ಲೇ ಮೃತ ಪಟ್ಟರೆ, ಗಂಭೀರ ಸ್ಥಿತಿಯಲ್ಲಿದ್ದ ಮೂರ್ತಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆಕಗ್ಗಲೀಪುರ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದಾರೆ.
ತಮಿಳು ನಾಡು ಗಡಿಯಿಂದ ಬನ್ನೇರುಘಟ್ಟದತ್ತ ಆಹಾರ ಮತ್ತು ನೀರು ಅರಸಿ 200ಕ್ಕೂ ಹೆಚ್ಚು ಆನೆಗಳು ಬಂದಿರುವುದಾಗಿ ವರದಿಯಾಗಿದೆ.