ಸಚಿವ ರಮೇಶಕುಮಾರ್ ಉತ್ತಮ ಹರಿಕಥೆದಾಸ!
Team Udayavani, Jun 3, 2017, 11:07 AM IST
ದಾವಣಗೆರೆ: “ಆರೋಗ್ಯ ಸಚಿವ ಆರ್. ರಮೇಶಕುಮಾರ್ ಒಳ್ಳೆ ಹರಿಕಥೆದಾಸ. ನಿಮ್ಮ ಊರಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದರೆ ಕರೆಯಿಸಿ.
ಚೆನ್ನಾಗಿ ಮಾತನಾಡುತ್ತಾರೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವೀಲ್ಚೇರ್ ಇಲ್ಲದೆ ರೋಗಿಯನ್ನು ಪತ್ನಿ ಎಳೆದುಕೊಂಡು ಹೋಗುತ್ತಿದ್ದ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಗೋಡು ತಿಮ್ಮಪ್ಪ ಹಾಗೂ ಆರ್. ರಮೇಶ್ಕುಮಾರ್ ಕಾಗದದ ಹುಲಿಗಳು. ಅವರಿಬ್ಬರೂ ಮಂತ್ರಿಗಳಾಗುವ ಮುಂಚೆ ಮಾತನಾಡುತ್ತಿದ್ದ ರೀತಿಗೂ ಈಗಿನ ವರ್ತನೆಗೂ ವ್ಯತ್ಯಾಸವಿದೆ ಎಂದು ಟೀಕಿಸಿದರು.