ಹೊನ್ನಾವರದಲ್ಲಿ 3ನೇ ದಿನವೂ ಸ್ವಯಂ ಘೋಷಿತ ಬಂದ್
Team Udayavani, Dec 10, 2017, 6:30 AM IST
ಹೊನ್ನಾವರ(ಉತ್ತರ ಕನ್ನಡ): ಗಲಭೆಯಲ್ಲಿ ನಾಪತ್ತೆಯಾದ ತರುಣ ಪರೇಶ್ ಮೇಸ್ತ ನಿಗೂಢ ಸಾವು, ನಂತರದ ಬೆಳವಣಿಗೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಪ್ರವೇಶ, ಉದ್ರಿಕ್ತ ವಾತಾವರಣದಿಂದ ಬಸವಳಿದ ಹೊನ್ನಾವರದಲ್ಲಿ ಮೂರನೇ ದಿನವೂ ಸ್ವಯಂ ಘೋಷಿತ ಬಂದ್ ಮುಂದುವರಿದಿದೆ.
ಗಲಭೆಯಿಂದ ಕಂಗೆಟ್ಟಿರುವ ಹೊನ್ನಾವರ ಪಟ್ಟಣ ಆತಂಕದ ಛಾಯೆಯೊಂದಿಗೆ ಜನಸಂಚಾರವಿಲ್ಲದೆ ನಿಸ್ತೇಜವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಗ್ರಾಮೀಣ ಬಸ್ ಸಂಚಾರಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಶಾಲಾ ಕಾಲೇಜುಗಳ ರಜೆ ಘೋಷಣೆ ಮೂರನೇ ದಿನವೂ ಮುಂದುವರಿದಿದ್ದು, ಜನಸಂಚಾರವೂ ವಿರಳವಾಗಿ ಪಟ್ಟಣ ಬಿಕೋ ಎನ್ನುತ್ತಿತ್ತು.ತಾಲೂಕಿನ ಕವಲಕ್ಕಿ, ವಲ್ಕಿ, ಹಡಿನಬಾಳ, ಅರೇಅಂಗಡಿ, ಕಾಸರಕೋಡ ಸೇರಿ ಅಲ್ಲಲ್ಲಿ ಕೆಲ ಗುಂಪುಗಳಿಂದ ಮನೆಗಳಿಗೆ ಕಲ್ಲು ತೂರಾಟ ನಡೆದಿದ್ದು, ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಈ ವೇಳೆ ಫೋಟೋ ತೆಗೆಯಲು ಹೋದ ವರದಿಗಾರನ ಮೇಲೆ ಹಲ್ಲೆ ಮಾಡಲಾಗಿದೆ. ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ವರದಿಗಾರನ ಮೇಲೆ ಹಲ್ಲೆ, ಬೈಕ್ ಜಖಂ: ಗಲಭೆಗೆ ಸಂಬಂಧಿ ಸಿ ಗುಂಪೊಂದು ಪುಂಡಾಟಿಕೆ ನಡೆಸುತ್ತಿರುವುದನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ವರದಿಗಾರನ ಮೇಲೆ ಹಲ್ಲೆ ನಡೆಸಿ, ಬೈಕ್ ಜಖಂಗೊಳಿಸಿರುವ ಘಟನೆ ತಾಲೂಕಿನ ಹಡಿನಬಾಳದಲ್ಲಿ ನಡೆದಿದೆ. ಹಲ್ಲೆಗೊಳಗಾಗಿರುವ ವರದಿಗಾರ ಪ್ರೊ.ಎಂ.ಜಿ. ಹೆಗಡೆ ಈ ಕುರಿತು ಪಟ್ಟಣದಲ್ಲಿ ಹಾಜರಿದ್ದ ಎಸ್ಪಿ ವಿನಾಯಕ ಪಾಟೀಲ್ರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ