ಒಂದಲ್ಲ, ಎರಡಲ್ಲ, ಸಹಸ್ರಾರು ವಿವೇಕಾನಂದರು!
Team Udayavani, Jan 13, 2018, 6:05 AM IST
ಬೆಳಗಾವಿ: ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ 16ರಿಂದ 39 ವಯಸ್ಸಿನ 10,054 ಜನರು
ವಿವೇಕಾನಂದರ ವೇಷ ಧರಿಸಿದರು.
ಜೊತೆಗೆ, 884 ವಾದ್ಯಗಾರರು ಕಹಳೆ, ಜಗ್ಗಲಿಗೆ, ಡೊಳ್ಳು, ಸಂಬಾಳ, ಚಂಡೆ, ಮದ್ದಳೆ, ನಗಾರಿ, ಮೈಸೂರಿನ
ವಾದ್ಯಗಳು ಸೇರಿ ವಿವಿಧ ದೇಸಿ ವಾದ್ಯಗಳನ್ನು ಸಾಮೂಹಿಕವಾಗಿ ಬಾರಿಸಿದರು. ಇವೆರಡೂ ಏಷಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರವೇಶಿಸುವ ಮೂಲಕ ಮಠದ ಹೆಸರು ಇತಿಹಾಸಕ್ಕೆ ಸೇರ್ಪಡೆಯಾ ಯಿತು. ಈ ಸಂಸ್ಥೆಗಳ ಮುಖ್ಯಸ್ಥರಾದ ಡಾ| ಮನೀಷ ವಿಷ್ಣುಯಿ ಹಾಗೂ ಡಾ| ಅನಿತಾ ದೇಸಾಯಿ ಈ ಎರಡೂ ದಾಖಲೆಗಳನ್ನು ವೇದಿಕೆಯಲ್ಲಿ ಘೋಷಿಸಿ, ಶ್ರೀ ರವಿಶಂಕರ ಗುರೂಜಿ ಹಾಗೂ ಡಾ| ಮುರುಘರಾಜೇಂದ್ರ ಸ್ವಾಮಿಗಳಿಗೆ ಪ್ರಮಾಣ ಪತ್ರ ನೀಡಿದರು. ಈ ಮುಂಚೆ 2015ರಲ್ಲಿ ರಾಯಪುರದಲ್ಲಿ ಮಹಾವೀರ ಇಂಟರನ್ಯಾಷನಲ್ ವತಿಯಿಂದ 2576 ಜನ ವಿವೇಕಾನಂದರ ವೇಷ ಧರಿಸಿದ್ದು ದಾಖಲೆಯಾಗಿತ್ತು. ಸ್ವಾಮಿ ವಿವೇಕಾನಂದರ
ವೇಷಧಾರಿಗಳಿಗೆ ಎಸ್.ಎಸ್.ಆರ್ಟ್ಸ್ನ 70 ಜನರ ತಂಡ ಪೇಟಾ ತೊಡಿಸಿತ್ತು. ಜತೆಗೆ ವೇಷಧಾರಿಗಳು ವಿವೇಕಾನಂದರ ಸಂದೇಶವನ್ನು ಸಾಮೂಹಿಕವಾಗಿ ಹೇಳುವ ದಾಖಲೆ ಜ.13ರಂದು ನಿರ್ಮಾಣವಾಗಲಿದೆ. ಈ ದಾಖಲೆಯೊಂದಾದರೆ ಮುಗಳಖೋಡ ಮಠದಲ್ಲಿ ಒಟ್ಟು ಮೂರು ದಾಖಲೆಗಳು ನಿರ್ಮಾಣವಾದಂತಾಗುತ್ತದೆ.
– ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!