ಗೊಮ್ಮಟನ ತಲೆಗೆ ಸಕಲ ನದಿಗಳ ನೀರು


Team Udayavani, Feb 18, 2018, 6:00 AM IST

Abhishekha-(10)-(1).jpg

ಶ್ರವಣಬೆಳಗೊಳ: ವಿಂಧ್ಯಗಿರಿಯ ಬಾಹುಬಲಿಯ ಮಸ್ತಕದ ಮೇಲೆ ಭಾರತದ ಸಕಲ ನದಿಗಳ ನೀರು!. ಇದು ಮಹಾಮಜ್ಜನದ ಧಾರ್ಮಿಕ ಮಹತ್ವ.

ಮೊದಲ ದಿನ 108 ಜಲಕಲಶಗಳ ಅಭಿಷೇಕ ನಂತರ ಪಂಚಾಮೃತ ಕಲಶಗಳ ಅಭಿಷೇಕ. ಮುಂದಿನ ದಿನಗಳಲ್ಲಿ 1008 ಜಲಕಲಶಗಳ ಅಭಿಷೇಕ ನಡೆಯಲಿದೆ. 108 ಕಲಶಗಳಿಗೆ ಇಂದ್ರರು (ಅರ್ಚಕರು) ಅರ್ಚನೆ ಪೂಜೆ ನಡೆಸಿದ ತರುವಾಯ ಅಭಿಷೇಕ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ಕಲಶಮಂಟಪದಲ್ಲಿ ರಂಗವಲ್ಲಿ ಹುಡಿ ಅಥವಾ ಅಕ್ಕಿಹುಡಿಯಿಂದ ಮಂಡಲ ಬರೆದು ಅದರಲ್ಲಿ ದಪ್ಪನೆಯ ಬಟ್ಟೆಯಿಂದ ಸೋಸಿ ಕ್ರಿಮಿಕೀಟಗಳಿಲ್ಲದಂತೆ ತಂದ ಶುದ್ಧಜಲ ಪೂರಣ ಮಾಡಿದ ಪೂರ್ಣಕುಂಭ ಕಲಶ ಮಧ್ಯಭಾಗದಲ್ಲಿ, ಅದರ ಸುತ್ತ ಚತುಷೊRàನ ಕಲಶ, ನಂತರ 9 ಕಲಶಗಳು, 1 ಮೂಲೆಯಲ್ಲಿ 7 ಕಲಶಗಳ ಸಾಲಿನಂತೆ 2 ಸಾಲು, 4 ಮೂಲೆಗೆ 5 ರಂತೆ 20 ಕಲಶಗಳು ಹೀಗೆ ಒಟ್ಟು 108 ಕಲಶಗಳನ್ನು ಭತ್ತದ ರಾಶಿಯ ಮೇಲೆ ಇಟ್ಟು ಆರಾಧಿಸಲಾಗುತ್ತದೆ. ಕಲಶಕ್ಕೆ ಅಷ್ಟಗಂಧ ಪ್ರಾಸಕಜಲವನ್ನು ಪೂರಣ ಮಾಡಿ , ಶ್ವೇತದಾರದ  ಬಂಧನ ಮಾಡಿ, ವಸಉಗಳಿಂದ ಅಲಂಕರಿಸಿ, ಮಾವಿನ ಎಲೆ,ದಭೆì, ನಾರಿಕೇಳ ಫಲವನ್ನಿಟ್ಟು ಕಲಶ ಜೋಡಿಸಲಾಗುತ್ತದೆ.

ಇಂದ್ರರ (ವೈದಿಕರ) ಮಂತ್ರೋಕ್ತ ವಿಧಿವಿಧಾನ ಮೂಲಕ ಈ ಕಲಶಗಳಿಗೆ ಗಂಗಾ, ಸಿಂಧು ಮೊದಲಾದ ಪವಿತ್ರ ನದಿಗಳನ್ನು
ಆಹ್ವಾನಿಸಲಾಗುತ್ತದೆ. ನಂತರ ಕ್ರಮವಾಗಿ ಜಲಕಲಶ, ಎಳನೀರು(ನಾರಿಕೇಳ), ಕಬ್ಬಿನರಸ (ಇಕ್ಷುರಸ), ಹಾಲು, ಅಕ್ಕಿಹಿಟ್ಟು (ಶ್ವೇತಕಲ್ಕಚೂರ್ಣ), ಅರಿಶಿನ, ಕಷಾಯ (ಗಿಡಮೂಲಿಕೆಗಳಿಂದ ತಯಾರಿಸಿದ್ದು), ಪ್ರಥಮಕೋನ ಕಲಶ, ದ್ವಿತೀಯ ಕೋನ ಕಲಶ, ತೃತೀಯ ಕೋನ ಕಲಶ, ಚತುರ್ಥಕೋನ ಕಲಶ, ಗಂಧ, ಚಂದನ, ಅಷ್ಟಗಂಧ, ಕೇಸರಿ, ರಜತ, ಸುವರ್ಣ, ಪುಷ್ಪ, ಪೂರ್ಣಕುಂಭ ಕಲಶಗಳ ಅಭಿಷೇಕ ನಡೆಯುವುದು ರೂಢಿ.

ಮಸ್ತಕಾಭಿಷೇಕದಲ್ಲಿ ಕಲಶಗಳ ವರ್ಗೀಕರಣ ಹೀಗಿದೆ; ಪ್ರಥಮ ಕಲಶ, ಶತಾಬ್ದಿ ಕಲಶ, ನವರತ್ನ ಕಲಶ, ರತ್ನ ಕಲಶ, ಸುವರ್ಣ ಕಲಶ, ದಿವ್ಯ ಕಲಶ, ರಜತ ಕಲಶ, ತಾಮ್ರ ಕಲಶ,ಕಾಂಚ್ಯ ಕಲಶ, ಶುಭಮಂಗಲ ಕಲಶ, ಜನಮಂಗಲ ಕಲಶ,ಗುಳಕಾಯಜ್ಜಿ ಕಲಶ ಎಂದು ವಿಂಗಡಿಸಲಾಗಿದೆ.

ಗುಳಕಾಯಜ್ಜಿ ಕಲಶ: ಶ್ರವಣಬೆಳಗೊಳದಲ್ಲಿ ಮಾತ್ರ ಇರುವುದು. ಚಾವುಂಡರಾಯ ಬಾಹುಬಲಿಗೆ ಪಂಚಾಮೃತ ಅಭಿಷೇಕ ಮಾಡಿಸಿದ. ಅದು ಬಾಹುಬಲಿಯ ನಿಲುವಿನ ವಿಗ್ರಹದ ಮೊಣಕಾಲಿನವರೆಗೂ ತಲುಪಲಿಲ್ಲ. ಆಗ ಗುಳ್ಳಕಾಯಿ ಅಜ್ಜಿ ಅಭಿಷೇಕಕ್ಕೆ ಚಾವುಂಡರಾಯನ ಅನುಜ್ಞೆ ಕೇಳಿದಳು, ಆದರೆ ರಾಜ ನಕ್ಕು ಅಣಕಿಸಿ ಮುದುಕಿಗೆ ಅವಕಾಶ ನೀಡಿದ. ಆಕೆ ಚಿಕ್ಕ ಗಿಂಡಿಯಲ್ಲಿ ಹಾಕಿದ ಹಾಲಿನಿಂದ ಇಡೀ ಮೂರ್ತಿಯ ಮೈ ತೋಯ್ದು ಹೋಯಿತು. ಅಭಿಷೇಕ ಪೂರ್ಣವಾಯಿತು. ಬಟ್ಟಲಿನಿಂದ ಸುರಿದ ಹಾಲು ಹೊಳೆಯಾಗಿ ಹರಿದು ಬೆಟ್ಟದ ತಳದ ಕೊಳ ಸೇರಿ ತುಂಬಿತು ಎನ್ನುವುದು ಉಲ್ಲೇಖ. ಹೀಗಾಗಿ ಅದೇ ಹೆಸರಿನಲ್ಲಿ ಇಲ್ಲಿ ವಿಶೇಷ ಕಲಶ ಇಡಲಾಗುತ್ತದೆ ಪ್ರತಿದಿನ ಕೊನೆಯಲ್ಲಿ ಈ ಕಳಶ ಅಭಿಷೇಕ ನಡೆಯುವುದು ಪ್ರತೀತಿ.

ಅಭಿಷೇಕದ ವೇಳೆ ಬಿಸಿಲು ನೆತ್ತಿಗೇರಿತ್ತು: ಈ ಸಹಸ್ರಮಾನದ ಎರಡನೆ ಮಸ್ತಕಾಭಿಷೇಕದ ಸಂಭ್ರಮದಲ್ಲಿ ಮೊತ್ತ ಮೊದಲ ಕಲಶವನ್ನು ಅಭಿಷೇಕ ಮಾಡುವ ಸಮಯ ಆದಾಗ ಮಧ್ಯಾಹ್ನ ಗಡಿಯಾರ 2.32 ತೋರಿಸುತ್ತಿತ್ತು. ವಿಂಧ್ಯಗಿರಿಯ ಎದುರಿನ ಚಂದ್ರಗಿರಿ (ಚಿಕ್ಕಬೆಟ್ಟ) ಮೂಲಕ ಮಸ್ತಕಾಭಿಷೇಕ ವೀಕ್ಷಿಸಲು ಬರಿಗಾಲಲ್ಲಿ, ಬಿರು ಬಿಸಿಲಲ್ಲಿ ಕರಿ ಕಲ್ಲಿನ ಮೇಲೆ ನಡೆದು ಬಂದು ಕೆಂಪಿರಿದ ಪಾದಗಳಿಗೆ ಬಿಸಿಗಾಳಿ ಊದುತ್ತಾ ಯಾವಾಗ ಗೋಮಟೇಶನ ಅಭಿಷೇಕವಾಗುವುದೋ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರು ಮೊದಲ ಕಲಶದ ನೀರ ಹನಿಗಳು ಗೋಮಟನ ಶಿರದ ಮುಂಗುರಿಳಿನ ರಚನೆಯ ಮೇಲೆ ಸ್ಪರ್ಶವಾಗುತ್ತಿದ್ದಂತೆ ಜೈ ಬೋಲೊ ಬಾಹುಬಲಿ ಭಗವಾನ್‌ ಕೀ ಜೈ, ಗೋಮಟೇಶ್ವರ ಭಗವಾನ್‌ ಕೀ ಜೈ ಎಂದು ಹರ್ಷೋದ್ಗಾರ ಮಾಡಿದರು.

ಜಾರಿದ ಕಲಶ 
108 ಕಲಶಗಳ ಅಭಿಷೇಕದ ವೇಳೆ ಮಹಿಳೆಯೊಬ್ಬರ ಕೈಯಿಂದ ಕಲಶ ಜಾರಿ ಕೆಳಗೆ ಬಿತ್ತು. ಇದೊಂದು ಅಪರೂಪದ ಘಟನೆಯಾಗಿದ್ದು, ಇಂತಹ ಪ್ರಮಾದ ಹಿಂದೆಂದೂ ಆಗಿರಲಿಲ್ಲ ಎಂದು ಭಕ್ತರು ಮಾತಾಡಿಕೊಂಡರು.

ಭೋಜನಕ್ಕಾಗಿ 17 ಪಾಕಶಾಲೆಗಳು 
ಬೆಟ್ಟದ ಸುತ್ತ ತಲೆ ಎತ್ತಿರುವ ಉಪನಗರಗಳು ಹಾಗೂ ಸಾರ್ವಜನಿಕ ಸೇರಿ 17 ಪಾಕಶಾಲೆಗಳು ಹಾಗೂ ಭೋಜನಾಲಯಗಳು ಶ್ರವಣಬೆಳಗೊಳದಲ್ಲಿ ಮಹಾಮಸ್ತಾಭಿಷೇಕಕ್ಕೆ ಬರುವ ಭಕ್ತಾದಿಗಳು ಹಾಗೂ ಕರ್ತವ್ಯನಿರತ ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ ಮತ್ತು
ಮಧ್ಯಾಹ್ನ ಮತ್ತು ರಾತ್ರಿಯ ಭೋಜನಗಳನ್ನು ಸ್ವಾದಿಷ್ಟಭರಿತವಾಗಿ ಮತ್ತು ವ್ಯವಸ್ಥಿತವಾಗಿ ಉಣಬಡಿಸುತ್ತಿವೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.