ಜೆಡಿಎಸ್ ಕಾರ್ಯಕರ್ತನ ಬರ್ಬರ ಹತ್ಯೆ ;ಗೌರಿ ಬಿದನೂರು ಉದ್ವಿಗ್ನ
Team Udayavani, Apr 27, 2018, 9:14 AM IST
ಗೌರಿ ಬಿದನೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಮಾರಾಮಾರಿಯಲ್ಲಿ ಮುಂದಿನ ವಾರ ಹೊಸ ಬಾಳಿಕೆ ಕಾಲಿರಿಸಬೇಕಾಗಿದ್ದ ಯುವಕನೊಬ್ಬಬರ್ಬರವಾಗಿ ಹತ್ಯೆಗೀಡಾಗಿದ್ದಾನೆ.
ಗುರುವಾರ ರಾತ್ರಿ ಬಾರ್ವೊಂದರ ಎದುರುಗಡೆ 2 ಪಕ್ಷಗಳ ಕಾರ್ಯಕರ್ತರ ನಡೆವೆ ಮಾರಾಮಾರಿ ನಡೆದಿದ್ದು,ಈ ವೇಳೆ 27 ವರ್ಷ ಪ್ರಾಯದ ರಾಮರೆಡ್ಡಿಗೆ ಚೂರಿಯಿಂದ ಹೊಟ್ಟೆಗೆ ಇರಿಯಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ರಾಮಾರೆಡ್ಡಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಆರಂಭಿಸುವ ಮುನ್ನವೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ರಾಮರೆಡ್ಡಿಗೆ ಮುಂದಿನ ವಾರ ಮದುವೆ ನಿಗದಿಯಾಗಿತ್ತು. ಮಾರಾಮಾರಿಯಲ್ಲಿ ಇನ್ನಿಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿರುವ ಪೊಲೀಸರು ದಾಳಿ ನಡೆಸಿದ ರೌಡಿ ಶೀಟರ್ ಎನ್ನಲಾದ ರಮೇಶ್ ಎಂಬಾತನನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು,ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿ ಬಿದನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.