ಫೇಸ್ಬುಕ್ ಲವ್,ದೋಖಾ:ಯಶವಂತಪುರ ಠಾಣೆ ಮೆಟ್ಟಿಲೇರಿದ ಯುವತಿ
Team Udayavani, Jul 17, 2018, 4:18 PM IST
ಬೆಂಗಳೂರು: ಫೇಸುಬುಕ್ ಸ್ನೇಹಿತನೊಬ್ಬ ಪ್ರೀತಿಯ ನಾಟಕವಾಡಿ, ನಿರಂತರವಾಗಿ ಸುತ್ತಾಡಿ ಮದುವೆಯಾಗುವ ಭರವಸೆ ನೀಡಿ ದೇಹ ಸಂಪರ್ಕ ಹೊಂದಿ ವಂಚಿಸಿರುವುದಾಗಿ ಯುವತಿಯೊಬ್ಬರು ಯಶವಂತಪುರ ಠಾಣೆಯ ಮೆಟ್ಟಿಲೇರಿದ್ದಾರೆ.
ಆಂಧ್ರದ ಕರ್ನೂಲು ಮೂಲದ ನರೇಶ್ ಎಂಬಾತ ನನ್ನನ್ನು ಪ್ರೀತಿಸಿ ಸುತ್ತಾಡಿ ಮನೆಗೂ ಕರೆದುಕೊಂಡು ಹೋಗಿ ಹೆತ್ತವರಿಗೂ ಪರಿಚಯಿಸಿದ್ದ. ಇದೀಗ ಜಾತಿಯ ನೆಪ ಮುಂದಿಟ್ಟು ಮದುವೆಯಾಗದೆ ವಂಚಿಸಿರುವುದಾಗಿ ಹೇಳಿಕೊಂಡಿದ್ದಾರೆ.
ವಂಚನೆ ಮಾಡಿರುವ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ ಎಂದು ಯುವತಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಐಪಿಸಿ ಸೆಕ್ಷನ್ 376,417 ಮತ್ತು ಜಾತಿನಿಂದನೆ ಕೇಸ್ಗಳನ್ನು ಯುವಕನ ವಿರುದ್ಧ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.