ಲಾಂಗು, ಮಚ್ಚು; ಸಿನಿಮೀಯ ರೀತಿಯಲ್ಲಿ ಗೋದಾಮಿಗೆ ನುಗ್ಗಿ ದರೋಡೆ!
Team Udayavani, Jul 27, 2018, 6:28 PM IST
ಬೆಂಗಳೂರು:ಸುಮಾರು 15 ಮಂದಿ ಮುಸುಕುಧಾರಿ ವ್ಯಕ್ತಿಗಳು ಕೈಯಲ್ಲಿ ಲಾಂಗು, ಮಚ್ಚು ಹಿಡಿದುಕೊಂಡು ಬಂದು ಸಿನಿಮೀಯ ರೀತಿಯಲ್ಲಿ ಕೋಟ್ಯಂತರ ಮೌಲ್ಯದ ತಾಂತ್ರಿಕ ಉಪಕರಣಗಳನ್ನು ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಯಂಟಗಾನಹಳ್ಳಿ ಸಮೀಪದ ಗೋದಾಮಿಗೆ ನುಗ್ಗಿದ್ದ ದರೋಡೆಕೋರರ ತಂಡ ಭದ್ರತಾ ಸಿಬ್ಬಂದಿ ಸಂಜೀವಯ್ಯನನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದಾರೆ.
ಗೋದಾಮಿನಲ್ಲಿದ್ದ ತಾಂತ್ರಿಕ ಉಪಕರಣಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.