ಆದಿವಾಸಿಗಳಿಗೆ ಸವಲತ್ತು ನೀಡಲು ಸಿದ್ಧ


Team Udayavani, Aug 10, 2018, 6:55 AM IST

9bnp-3.jpg

ಬೆಂಗಳೂರು: ಆದಿವಾಸಿ ಸಮುದಾಯಗಳಿಗೆ ಸರ್ಕಾರ ಅಗತ್ಯ ಸೌಲತ್ತು ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ
ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

24ನೇ ವಿಶ್ವ ಆದಿವಾಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿ ಸಮುದಾಯಗಳಿಗೆ ಸರ್ಕಾರ ಅಗತ್ಯ ಸೌಲತ್ತು ನೀಡಲು ಸಿದ್ಧವಿದೆ. ಆದಿವಾಸಿ ಸಮಾಜ ಕಷ್ಟದಲ್ಲಿದೆ ಎನ್ನುವ ನೋವು ನನಗಿದೆ. ಸರ್ಕಾರ ನಿಮ್ಮೆಲ್ಲರನ್ನು ಗುರುತಿಸುವಲ್ಲಿ ಕಡೆಗಣಿಸಿದೆ. ಶೈಕ್ಷಣಿಕವಾಗಿ  ನಾವು ನಿಮ್ಮನ್ನು ಕಡೆಗಣಿಸಿದ್ದೇವೆ. ನಿಮ್ಮ ಹಕ್ಕುಗಳನ್ನು ಪಡೆಯುವುದರಲ್ಲಿ ನಿಮಗೆ ಅನ್ಯಾಯವಾಗಿರುವ ಬಗ್ಗೆ ನಾನು ಗಮನಿಸಿದ್ದೇನೆ ಎಂದರು.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕಡಿತಗೊಳಿಸುತ್ತಿರುವುದಾಗಿ ವರದಿಗಳು ಬರುತ್ತಿವೆ. ಶಾದಿ
ಭಾಗ್ಯ, ಮಾತೃಪೂರ್ಣ ಯೋಜನೆಗಳಲ್ಲಿ ಹಣ ಕಡಿತ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆ ವಿಷಯವೇ ನನಗೆ ಗೊತ್ತಿಲ್ಲ. ನನಗೆ ಯಾವುದೇ ಜಾತಿ,ಪ್ರದೇಶ ಇಲ್ಲ. ನಾನು ಬಡವರ ಜತೆ ಬೆರೆಯುವಂತವನು.
ಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುವುದರಿಂದಲೇ ಜನರು ಪ್ರತಿ ದಿನ ನನ್ನ ಮನೆ ಹಾಗೂ ವಿಧಾನಸೌಧದ ಮುಂದೆ ಬಂದು ನಿಲ್ಲುತ್ತಾರೆ. ವಿಧಾನಸೌಧ ಹಾಗೂ ಗೃಹ ಕಚೇರಿ ಪ್ರವೇಶಕ್ಕೆ ಯಾರಿಗೂ ನಿರ್ಬಂಧ ಹೇರಿಲ್ಲ. ಆ ರೀತಿಯ ಆದೇಶವನ್ನೂ ಮಾಡಿಲ್ಲ ಎಂದರು.

ಆದಿವಾಸಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ಯೆಗಳ ಮಾಹಿತಿ ಪಡೆಯುವಂತೆ ಸಚಿವರಿಗೆ ಸೂಚಿಸಿದ್ದೆ. ಆದರೆ, ಆದಿವಾಸಿಗಳನ್ನು ನಿರ್ಲಕ್ಷಿಸಿದರು ಎಂಬ ಆರೋಪ ಬರಬಾರದು ಎಂದು ಬಂದಿರುವುದಾಗಿ ತಿಳಿಸಿದರು.

ಕಲಬುರಗಿಯ ಕನಕಗುರು ಪೀಠಾಧ್ಯಕ್ಷ ಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿ,ಮುಖ್ಯಮಂತ್ರಿ ಕುಮಾರಸ್ವಾಮಿ ತಾಯಿ ಕರುಳ ಸಂಸ್ಕೃತಿಯವರು. ಬೇರೆ ಮುಖ್ಯಮಂತ್ರಿಗಳು ಆದಿವಾಸಿಗಳ ಬಗ್ಗೆ ಮಲತಾಯಿ ಪ್ರೀತಿ ತೋರಿದ್ದರು. ಪ್ರಾಣಿಗಳಿಗಿಂತ ನಿಕೃಷ್ಠವಾಗಿ ಬದುಕುತ್ತಿರುವ ಆದಿವಾಸಿ ಜನರನ್ನು ಕಾಪಾಡುವ ಆಡಳಿತ ನೀಡಬೇಕು. ಆದಿವಾಸಿ ಜನಾಂಗ ಅವರಿಂದ ತಾಯಿ ಪ್ರೀತಿ ಬಯಸುತ್ತಿದೆ. ಅತ್ತೆ ಪ್ರೀತಿ ನಮಗೆ ಬೇಡ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌, ಸಚಿವ ಬಂಡೆಪ್ಪ ಕಾಂಶಪೂರ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಹಾಜರಿದ್ದರು.

ಕ್ಷಮೆಯಾಚಿಸಿದ ಸಿಎಂ
ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ತಮ್ಮ ಮಗನ
ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಇದ್ದಿದ್ದರಿಂದ ಒಬ್ಬ ತಂದೆಯಾಗಿ ಮಗನ ಭವಿಷ್ಯ ರೂಪಿಸಬೇಕಾದ ಜವಾಬ್ದಾರಿಯೂ ನನ್ನ ಮೇಲಿದೆ. ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ. ನನ್ನ ಕಷ್ಟ ನನಗೆ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯಿದೆಯಿಂದ ಬುಡಕಟ್ಟು ಜನಾಂಗಕ್ಕೆ ಯಾವುದೇ ಪ್ರಯೋಜನವಿಲ್ಲ. ಅರಣ್ಯ ಕಾಯ್ದೆಯನ್ನು ಸಡಿಲ ಮಾಡುವ ಅಗತ್ಯವಿದೆ.
ಪುಟ್ಟರಂಗಶೆಟ್ಟಿ, ಸಚಿವ

ಅರಣ್ಯ ಹಕ್ಕು ಕಾಯಿದೆ ಹೆಸರಿನಲ್ಲಿ ನಮಗೆ ನಿಷೇಧ ಹೇರಲಾಗಿದೆ. ಅರಣ್ಯ ಇಲಾಖೆಯವರು ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಆದಿವಾಸಿಗಳಿಗೆ ಅರಣ್ಯ ಗಾರ್ಡ್‌ ಹುದ್ದೆ ನೀಡಿದರೆ,ನಾವೇ ಅರಣ್ಯ ರಕ್ಷಿಸುತ್ತೇವೆ. ನಮಗೆ ಮನೆ ಕೊಡಿ.
– ಕೃಷ್ಣಯ್ಯ, ಆದಿವಾಸಿ ಅಲೆಮಾರಿ ಸಮುದಾಯದ
ಒಕ್ಕೂಟದ ಅಧ್ಯಕ್ಷ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.