ಮನೆ ದೋಣಿಯಂತೆ ಜಾರಿದರೂ ಆತಂಕ ತಪ್ಪಿಲ್ಲ
Team Udayavani, Aug 27, 2018, 6:15 AM IST
ಮಡಿಕೇರಿ: ಮನೆಯೊಂದು ದೋಣಿಯಂತೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಆ ಮನೆಗೆ ಹೊಂದಿಕೊಂಡಿರುವ ಮತ್ತೂಂದು ಮನೆಯವರ ಆತಂಕ ಇನ್ನೂ ಕಡಿಮೆಯಾಗಿಲ್ಲ.
ಮಡಿಕೇರಿ ನಗರದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕಾನ್ವೆಂಟ್ ರಸ್ತೆಯ ಮುತ್ತಪ್ಪ ಟೆಂಪಲ್ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ರಸ್ತೆಗೆ ತಾಗಿಕೊಂಡಿರುವ ಮನೆಯೊಂದರ ಹಿಂಬದಿಯ ಗುಡ್ಡ ಕುಸಿದ ಪರಿಣಾಮ ಮನೆ ಪೂರ್ಣವಾಗಿ ಸುಮಾರು 50 ಮೀಟರ್ ಜಾರಿ ಕೆಳಗೆ ಹೋಗಿದೆ. ಆದರೆ, ಘಟನೆ ಸಂಭವಿಸಿ ವಾರ ಕಳೆದರೂ ಪಕ್ಕದಲ್ಲಿರುವ ಕುಟುಂಬದವರ ಆತಂಕ ತಗ್ಗಿಲ್ಲ.
ಒಂದು ಮನೆ ಸಂಪೂರ್ಣ ಜಾರಿ ಕೆಳಗೆ ಬಿದ್ದಿದ್ದು, ಇನ್ನೊಂದು ಮನೆ ಅರ್ಧ ಮಾತ್ರ ಕುಸಿದು, ಇನ್ನರ್ಧ ಯಾವಾಗ ಬೇಕಾದರೂ ಬೀಳಬಹುದಾದ ಸ್ಥಿತಿಯಲ್ಲಿದೆ.ಅದರ ಕೆಳಭಾಗದಲ್ಲೇ ರಝಾಕ್ ಎಂಬುವರ ಮನೆಯಿದೆ. 15 ದಿನದ ಮಗು ಸೇರಿ 6 ಮಕ್ಕಳಿದ್ದಾರೆ.
ಮನೆಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ. ಪಕ್ಕದಲ್ಲಿ ಇನ್ನೊಂದು ಮನೆ ಇದೆ. ಅದರಲ್ಲಿ ತಾಯಿ ಮಗಳು ಸೇರಿ ಮೂವರು ವಾಸವಾಗಿದ್ದಾರೆ. ಇವರ್ಯಾರೂ ಈಗ ನೆಮ್ಮದಿಯಿಂದ ಇಲ್ಲ.
“ಮನೆ ಕುಸಿದು ಅವಶೇಷಗಳು ಹಾಗೇ ಬಿದ್ದಿವೆ.ಇನ್ನೊಂದು ಮನೆ ಅರ್ಧ ಕುಸಿದು ನಿಂತಿವೆ. ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ವಾಸವಾಗಿದ್ದೇವೆ. ಮೇಲಿದ್ದ ಮನೆ ಕುಸಿದು ನಮ್ಮ ಮನೆ ಮೇಲೆಯೇ ಬೀಳುವ ಸ್ಥಿತಿಯಲ್ಲಿದೆ’ ಎಂದು ರಝಾಕ್ ನೋವು ತೋಡಿಕೊಂಡರು. ಮನೆಯಲ್ಲಿ 15 ದಿನದ ಹಸುಗೂಸು ಸೇರಿ ಆರು ಮಕ್ಕಳಿದ್ದಾರೆ. ಸದಾ ಎಲ್ಲರ ಮೇಲೂ ಕಣ್ಣಿಡಲು ಸಾಧ್ಯವಿಲ್ಲ. ಈ ಹಿಂದೆ ಮನೆ ಕುಸಿದ ಸಂದರ್ಭದಲ್ಲಿ ಜೀವಭಯದಿಂದ ಓಡಿದ್ದೇವೆ. ಮತ್ತೆ ಮಳೆ ಸುರಿದರೆ ಮನೆಯ ಮೇಲೆ ನೇರ ಹಾನಿಯಾಗಲಿದೆ. ನಗರಸಭೆ ಅಧಿಕಾರಿಗಳು ಸಹಿತವಾಗಿ ಎಲ್ಲರೂ ಬಂದು ಪರಿಶೀಲಿಸಿ ಹೋಗಿದ್ದಾರೆ.
ಆದರೆ, ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.ರಝಾಕ್ ಅವರು ಕತಾರ್ನಲ್ಲಿ ಸರ್ಕಾರಿ ಶಾಲೆಯ
ಕಾರು ಚಾಲಕ. ಕಳೆದ ತಿಂಗಳಷ್ಟೇ ಕುಟುಂಬದವರನ್ನು ನೋಡಲು ಬಂದಿದ್ದರು. ಆ.28 ರಂದು ಅವರು ಮರಳಿ ಕತಾರ್ಗೆ ಹೋಗಬೇಕಿದೆ. ಆದರೆ, ಇಂತಹ ಸಂದರ್ಭದಲ್ಲಿ ಕುಟುಂಬದವರನ್ನು ಬಿಟ್ಟು ಹೋಗುವುದು ಹೇಗೆ ಎಂಬ ಚಿಂತೆ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ