ನಟ ವಿಜಯ್ ಸ್ಪಷ್ಟನೆ
Team Udayavani, Oct 3, 2018, 12:05 PM IST
ಬೆಂಗಳೂರು: ಕೀರ್ತಿಗೌಡ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿ ಮೊದಲ ಪತ್ನಿ ನಾಗರತ್ನಾ ನೀಡಿದ್ದ ದೂರಿನ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ನಟ ದುನಿಯಾ ವಿಜಯ್ ಮಂಗಳವಾರ ಗಿರಿನಗರ ಠಾಣೆಗೆ ಬಂದಿದ್ದರು.
ತಮ್ಮ ಪರ ವಕೀಲ ಹಾಗೂ ಎರಡನೇ ಪತ್ನಿ ಕೀರ್ತಿ ಗೌಡ ಜತೆಯಲ್ಲಿ ಮಧ್ಯಾಹ್ನ ಠಾಣೆಗೆ ಬಂದ ವಿಜಯ್, ಠಾಣಾಧಿಕಾರಿಗಳ ಜತೆ ಕೆಲ ಹೊತ್ತು ಚರ್ಚಿಸಿದರು.
ಇದೇ ವೇಳೆ ಪೊಲೀಸರ ಎದುರು ತಮ್ಮ ಹೇಳಿಕೆ ದಾಖಲಿಸಿದ ವಿಜಯ್, ನನ್ನ ಪತ್ನಿ ಕೀರ್ತಿ ಗೌಡ ಯಾವುದೇ ತಪ್ಪು ಮಾಡಿಲ್ಲ. ಆಭರಣವನ್ನು ಕಳವು ಮಾಡಿಲ್ಲ. ಹಾಗೆಯೇ ಯಾರ ಮೇಲೂ ಹಲ್ಲೆ ನಡೆಸಿಲ್ಲ. ವಿನಾ ಕಾರಣ ದೂರು ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.