ಫಸ್ಟ್ ನೈಟ್ ಅಪಹರಣ ಪ್ರಕರಣಕ್ಕೆ ತಿರುವು: ಸ್ವಇಚ್ಛೆಯಿಂದ ಹೋಗಿದ್ದೆ
Team Udayavani, Oct 11, 2018, 7:34 PM IST
ಕೊಪ್ಪಳ : ಮದುವೆಯಾದ ಹದಿನೈದು ದಿನಗಳ ಬಳಿಕ ಗೊತ್ತುಪಡಿಸಲಾಗಿದ್ದ ಫಸ್ಟ್ ನೈಟ್ ನಲ್ಲೇ ನಡೆಯಿತೆನ್ನಲಾಗಿದ್ದ ವಧುವಿನ ಕುತೂಹಲಕರ ಅಪಹರಣ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
“ನನ್ನನ್ನು ಯಾರೂ ಕಿಡ್ ನ್ಯಾಪ್ ಮಾಡಿಲ್ಲ; ನಾನೇ ಖುದ್ದಾಗಿ, ಸ್ವ ಇಚ್ಛೆಯಿಂದಲೇ ಹೋಗಿದ್ದೆ’ ಎಂದು ನವ ವಿವಾಹಿತೆ ಗಾಯತ್ರಿ ಸ್ಪಷ್ಟಪಡಿಸಿದ್ದಾರೆ.
“ನಾನು ಈ ಮೊದಲೇ ಅಂಜು ಕುಮಾರ್ ಎಂಬವರನ್ನು ಮದುವೆಯಾಗಿದ್ದೆ; ಆದರೆ ಅವರು ಕಟ್ಟಿದ್ದ ತಾಳಿಯನ್ನು ಕಿತ್ತು ಹಾಕಿ ನನಗೆ ಸೋದರ ಮಾವನ ಜತೆಗೆ ಬಲವಂತದಿಂದ ಮದುವೆ ಮಾಡಿಸಿದ್ದರು. ಇದು ನನಗೆ ಇಷ್ಟವಿಲ್ಲದ ಮದುವೆಯಾಗಿತ್ತು; ಹಾಗಾಗಿ ಫಸ್ಟ್ ನೈಟ್ ಗೊತ್ತುಪಡಿಸಲಾಗಿದ್ದ ರಾತ್ರಿಯೇ ನಾನು ನನ್ನ ಮೊದಲ ಪತಿ, ಅಂಜು ಕುಮಾರ್ ಗೆ ಫೋನ್ ಮಾಡಿ ನನ್ನನ್ನು ಕರೆದೊಯ್ಯುವಂತೆ ಕೇಳಿಕೊಂಡೆ. ಆದುದರಿಂದ ಯಾರೂ ನನ್ನನ್ನು ಅಪಹರಿಸಿಲ್ಲ; ನಾನೇ ಸ್ವಂತ ಇಚ್ಛೆಯಿಂದ ಹೋಗಿದ್ದೆ; ನನಗೆ ನನ್ನ ಮೊದಲ ಪತಿ ಅಂಜುಕುಮಾರ್ ಜತೆಗೆ ಬದುಕಲು ಬಿಡಿ’ ಎಂದು ನವವಿವಾಹಿತೆ ಗಾಯತ್ರಿ ಬೇಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ಸೆ.24ರಂದು ಗುಡೂರು ಗ್ರಾಮದ ಗಾಯತ್ರಿ ಮತ್ತು ಮಲ್ಲನಗೌಡ ಅವರ ವಿವಾಹವನ್ನು ಕುಟುಂಬದವರ ಸಮಕ್ಷಮ ಕುಷ್ಟಗಿತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ನಡೆಸಲಾಗಿತ್ತು.
ಫಸ್ಟ್ ನೈಟ್ ನಂದು ಶೌಚಾಲಯಕ್ಕೆ ಹೋಗಿದ್ದಾಗ ವಧು ವನ್ನು ಅಪಹರಿಸಲಾಗಿತ್ತು ಎಂದು ಸುದ್ದಿಯಾಗಿರುವುದು ಸುಳ್ಳು ಎಂದು ಗಾಯತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ