ಜಮಖಂಡಿಯಲ್ಲೂ ಬಂಡಾಯ
Team Udayavani, Oct 14, 2018, 6:55 AM IST
ಬಾಗಲಕೋಟೆ: ಜಮಖಂಡಿ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಶಮನಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಶತ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯಲ್ಲಿ ಬಿ.ಎಸ್.ಸಿಂಧೂರ ಹಾಗೂ ಕಾಂಗ್ರೆಸ್ನಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಜತೆಗೆ ತಮ್ಮ ಬೆಂಬಲಿಗರು, ಸಮಾನ ಮನಸ್ಕರರ ಸಭೆ ನಡೆಸಿ ಉಪ ಚುನಾವಣೆಗೆ ಸ್ಪರ್ಧೆ
ಮಾಡಬೇಕಾ ಅಥವಾ ಪಕ್ಷಾಂತರ ಮಾಡಬೇಕಾ ಎಂಬ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.ಅವರನ್ನು ಸಮಾಧಾನಪಡಿಸಲು ಸ್ವತಃ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮೊಬೈಲ್ ಮೂಲಕ ನಿತ್ಯ ಸಂಪರ್ಕ ಮಾಡುತ್ತಿದ್ದಾರೆ.