ರೆಡ್ಡಿ ಇಡಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ
Team Udayavani, Nov 8, 2018, 6:40 AM IST
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ಇಡಿ ಪ್ರಕರಣದ ಜತೆ ನಗರದ ಬೆಂಗಳೂರು ರಸ್ತೆಯಲ್ಲಿರುವ ರಾಜ್ಮಹಲ್ ಜ್ಯೂವೆಲರ್ಸ್ ಹೇಗೆ ಥಳಕು ಹಾಕಿಕೊಂಡಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸಿಸಿಬಿ ಪೊಲೀಸರ ವಶದಲ್ಲಿರುವ ರಮೇಶ ಸಹೋದರ ಎಸ್. ಸುರೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ಪೊಲೀಸರ ವಶದಲ್ಲಿರುವ ರಮೇಶ್ ನನ್ನ ಸಹೋದರ. ಅವರೊಂದಿಗೆ ನಾನೂ ಸಹ ಚಿನ್ನದ ವ್ಯಾಪಾರ ಮಾಡುತ್ತಿರುವೆ. ಕಳೆದೊಂದು ವಾರದಿಂದ ಸಹೋದರ ರಮೇಶ್ ನಮ್ಮ ಕುಟುಂಬದ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಾಲಿ ಜನಾರ್ದನರೆಡ್ಡಿ ವಿರುದ್ಧದ ಇಡಿ ಪ್ರಕರಣದ ಜತೆಗೆ ರಮೇಶ್ ಅವರ ಹೆಸರು ಹೇಗೆ ಸೇರಿಕೊಂಡಿದೆಯೋ ಗೊತ್ತಿಲ್ಲ. ರಮೇಶ್ಗೆ ಬೇಲ್ ಸಿಗುವ ಸಾಧ್ಯತೆಯಿದೆ.
ಅದೇನಾಗಿದೆಯೋ ಎಂಬುದು ಈವರೆಗೂ ತಿಳಿದಿಲ್ಲ. ನಮಗೂ ಇಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.