ಗೆಳೆತನಕ್ಕೆ ಪಕ್ಷಬೇಧವಿಲ್ಲ
Team Udayavani, Nov 13, 2018, 6:40 AM IST
ಬಿಜೆಪಿ ಅಷ್ಟೇ ಅಲ್ಲದೆ ಅನಂತಕುಮಾರ್ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಪ್ರಮುಖ ನಾಯಕರ ಜತೆಯೂ ಉತ್ತಮ ಸಂಬಂಧ ಹೊಂದಿದ್ದರು. ಜನತಾಪರಿವಾರದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್.ಪಟೇಲ್, ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಧರಂಸಿಂಗ್, ಬಂಗಾರಪ್ಪ, ಜಾಫರ್ ಷರೀಫ್ ಅವರೊಂದಿಗೆ ಉತ್ತಮ ಬಾಂಧವ್ಯ ಇತ್ತು.
ನರೇಂದ್ರಮೋದಿ ಅವರು ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣದಲ್ಲಿ ಒಮ್ಮೆ, ರೀ ಅನಂತಕುಮಾರ್ ನಾವೇ ಗೆಲ್ಲೋದು.
ಪ್ರಧಾನಿಯವರಿಗೆ ಏನೇನೋ ಹೇಳಿಕೊಡಬೇಡಪ್ಪಾ ಎಂದು ತಮಾಷೆ ಮಾಡಿದ್ದರು. ಹೀಗೆ ಎಲ್ಲ ರಾಜಕಾರಣಿಗಳ ಜತೆ ವೈಯಕ್ತಿಕವಾಗಿ ಉತ್ತಮ ಗೆಳೆತನ ಹೊಂದಿದ್ದರು. ರಾಜಕೀಯವಾಗಿ ಹೋರಾಟ ಇದ್ದರೂ ವೈಯಕ್ತಿಕ ಸಂಬಂಧ ಹಾಗೂ ರಾಜ್ಯದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶ ಸಂದರ್ಭಗಳಲ್ಲಿ ಎಂದೂ ಹಿಂದೇಟು ಹಾಕುತ್ತಿರಲಿಲ್ಲ. ಹೀಗಾಗಿ, ರಾಜ್ಯದ ನಾಯಕರಿಗೆ ಅನಂತಕುಮಾರ್ ಇಷ್ಟವಾಗುತ್ತಿದ್ದರು.
ಒಮ್ಮೆ ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಾಗ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಅವರಿಂದ ದೇವೇಗೌಡರಿಗೆ ದೂರವಾಣಿ ಕರೆ ಮಾಡಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮಾಡಿದ್ದರು.
ಸುವರ್ಣ ಚತುಷ್ಪಥ ಯೋಜನೆಗೆ ಸೇರ್ಪಡೆ
ಕೇಂದ್ರ ಸರ್ಕಾರದ ಸುವರ್ಣ ಚತುಷ್ಪಥ ಯೋಜನೆಯಡಿ ಬೆಂಗಳೂರನ್ನು ಸೇರ್ಪಡೆ ಮಾಡುವಲ್ಲಿಯೂ ಅನಂತ ಕುಮಾರ್
ಅವರ ಪಾತ್ರ ಮಹತ್ವದ್ದಾಗಿತ್ತು. ಈ ಯೋಜನೆ ವ್ಯಾಪ್ತಿಗೆ ಬೆಂಗಳೂರು ಸೇರಿಸಿದ್ದರ ಫಲವಾಗಿ ರಾಜಧಾನಿಯೊಂದಿಗೆ ಇತರ ನಗರಗಳು ಉತ್ತಮ ಸಂಪರ್ಕ ಪಡೆಯಲು ಅನುಕೂಲವಾಯಿತು.
ಹಾಗಾಗಿ ಸರಕು- ಸೇವೆ ಸಾಗಣೆಗೆ ಸೂಕ್ತ ವ್ಯವಸ್ಥೆ ದೊರೆತಂತಾಗಿದ್ದು, ಕೃಷಿ ಸಂಬಂಧಿತ ಉದ್ಯಮಗಳು ಸೇರಿದಂತೆ ಇತರೆ ವ್ಯವಹಾರಕ್ಕೆ ಕರ್ನಾಟಕದ ಇತರೆ ಭಾಗ ಸೇರಿದಂತೆ ದೇಶಾದ್ಯಂತ ವಿತರಣೆ ಗೊಳ್ಳಲು ಸಹಾಯಕವಾಗಲಿವೆ.
ವಾಂಬೆ ಆವಾಸ್ ಯೋಜನಾ
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತ ಕುಮಾರ್ ಅವರು ಆರ್ಥಿಕವಾಗಿ ಹಿಂದುಳಿದ ಹಾಗೂ ವಸತಿ ಹೀನರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವಲ್ಲಿಯೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ನಗರ ಪ್ರದೇಶದ ಬಡವರಿಗೆ ಸೂರು ಕಲ್ಪಿಸಲು “ವಾಂಬೆ’ (ವಾಲ್ಮೀಕಿ- ಅಂಬೇಡ್ಕರ್ ಆವಾಸ್ ಯೋಜನೆ) ಜಾರಿಗೊಳಿಸಿದ್ದರು. ಈ ಯೋಜನೆಯಡಿ ಬೆಂಗಳೂರಿನಲ್ಲೂ ಸಾಕಷ್ಟು ಬಡವರು ಸೂರು ಪಡೆಯುವಂತಾಯಿತು. ಜತೆಗೆ ನಗರದ ಸ್ವತ್ಛತೆಗೆ ಆದ್ಯತೆ ಹಾಗೂ ಬಡಜನತೆಗೆ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದನ್ನು ಇಂದಿಗೂ ನಗರದ ಹಲವು ಭಾಗದ ಬಡವರು ಸ್ಮರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು