ಧಾರವಾಡ : ರಣಭೀಕರ ಅಪಘಾತಕ್ಕೆ ಮುಂಬಯಿಯ 6 ಪ್ರವಾಸಿಗರು ಬಲಿ
Team Udayavani, Nov 17, 2018, 8:20 AM IST
ಧಾರವಾಡ: ಇಲ್ಲಿನ ಅಣ್ಣಿಗೇರಿ ಯ ಕೋಳಿವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಬಯಿಯಿಂದ ಹಂಪಿಗೆ ಆಗಮಿಸುತ್ತಿದ್ದ 6 ಮಂದಿ ಪ್ರವಾಸಿಗರು ದುರ್ಮರಣವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿಯೊಂದು ಪ್ರವಾಸಿಗರಿದ್ದ ಬಸ್ಗೆ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತ ದುರ್ದೈವಿಗಳು ವಿಶ್ವನಾಥ್(75),ದಿನಕರ್(74), ರಮೇಶ್ ಜಯಪಾಲ್ (70), ಸುಮೇಧಾ(65)ಲಾಹು(65)ಸುಚಿತ್ರಾ (65)ಎನ್ನುವವರಾಗಿದ್ದಾರೆ.
ಅಣ್ಣಿಗೇರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.