ಚಾ.ನಗರಕ್ಕೆ ಹತ್ತತ್ತು ಬಾರಿ ಬಂದರೂ ಅಲ್ಲಾಡಲಿಲ್ಲ ಪುಣ್ಯಾತ್ಮ: ಡಿಸಿಎಂ
Team Udayavani, Dec 9, 2018, 6:50 AM IST
ಚಾಮರಾಜನಗರ: ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬ ತಪ್ಪು ಕಲ್ಪನೆ ಬಿತ್ತಲಾಗಿತ್ತು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಬಾರಿ ಭೇಟಿ ನೀಡಿದರು. ಆದರೂ, ಅವರ ಅಧಿಕಾರ ಅಲ್ಲಾಡಲಿಲ್ಲ.. ಪುಣ್ಯಾತ್ಮ..!. ಹೀಗೆಂದವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.
ನಗರ ಸಮೀಪ ಶನಿವಾರ ನಡೆದ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿ, ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ತಮ್ಮ ಅಧಿಕಾರವನ್ನೂ ಪೂರೈಸಿದರು. ನಂತರ ಅಂತಹ ಕಲ್ಪನೆ ದೂರವಾಯಿತು. ನಾನು ಸಹ ರೇಷ್ಮೆ ಸಚಿವನಾದ ಮಾರನೆಯ ದಿನವೇ ಇಲ್ಲಿಗೆ ಬಂದಿದ್ದೆ. ನನಗೇನೂ ಆಗಲಿಲ್ಲ ಎಂದು ಹೇಳಿದರು. ಬಿಜೆಪಿಯ ಆರ್.ಅಶೋಕ್ ಅವರು ಈ ಸರ್ಕಾರವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಬೀಳಿಸುತ್ತಾರೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಐದು ವರ್ಷ ಪೂರ್ಣಗೊಳಿಸುತ್ತೇವೆ ಎಂದರು.