ಐಟಿ ರೇಡ್ ಯಾಕೆ ಆಗುತ್ತೆ ?:ಶೂಟಿಂಗ್ ಬಿಟ್ಟು ಮನೆಗೆ ಬಂದ ಸುದೀಪ್
Team Udayavani, Jan 3, 2019, 9:15 AM IST
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಮೈಸೂರಿನಲ್ಲಿ ಶೂಟಿಂಗ್ ನಿರತರಾಗಿದ್ದ ನಟ ಸುದೀಪ್ ಅವರು ಜೆ.ಪಿ.ನಗರದ ನಿವಾಸಕ್ಕೆ ಮರಳಿದ್ದಾರೆ.
ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ 3 ನಿನಿಮಾಗಳ ಬಜೆಟ್ ಕುರಿತಾಗಿ ಇರಬಹುದು,ವಿಲನ್, ಕೆಜಿಎಫ್ ಮತ್ತು ನಟ ಸಾರ್ವಭೌಮ ಚಿತ್ರ ಗಳ ಬಜೆಟ್ ಕುರಿತಾಗಿ ಬಂದಿರಬಹುದು ಎಂದರು.
ನಿರ್ಮಾಪಕರು ವಿತರಕರ ಕಡೆಯಿಂದ ಆಗಿರಬಹುದು. ವೈಯಕ್ತಿಕ ವಿಚಾರಗಳಿಗಾಗಿ ಆಗಿಲ್ಲ. ಐಟಿಗೆ ಅದರದ್ದೇ ಆದ ನೀತಿಗಳಿರುತ್ತವೆ ಎಂದರು.
ತಾಯಿ ಒಬ್ಬರೇ ಮನೆಯಲ್ಲಿದ್ದರು ಹಾಗಾಗಿ ಆತಂಕದಿಂದ ಮನೆಗೆ ಬಂದೆ ಎಂದಿದ್ದಾರೆ.
ಗುರುವಾರ ಬೆಳಗ್ಗೆ ಸ್ಯಾಂಡಲ್ವುಡ್ ಇತಿಹಾಸದಲ್ಲೆ ಮೊದಲು ಎನ್ನುವ ಹಾಗೆ ಏಕ ಕಾಲಕ್ಕೆ ಐಟಿ ಅಧಿಕಾರಿಗಳು ನಾಲ್ವರು ದಿಗ್ಗಜ ನಟರು ಮತ್ತು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ನಾಲ್ವರು ನಿರ್ಮಾಪಕರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಖ್ಯಾತ ನಟ ಶಿವರಾಜ್ ಕುಮಾರ್,ನಟ ಪುನೀತ್ ರಾಜ್ಕುಮಾರ್,ಕಿಚ್ಚ ಸುದೀಪ್, ಯಶ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಜಯಣ್ಣ, ಎಂಎಲ್ಸಿ ಸಿ.ಆರ್ ಮನೋಹರ್, ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರು ಸೇರಿ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ