ಇಂವಾ ಯಾವ ಊರಿನ ಮಾವಾ ಏನ್‌ ಚಲುವ… 


Team Udayavani, Jan 5, 2019, 12:30 AM IST

190104kpn43.jpg

ಧಾರವಾಡ: ಇಂವಾ ಯಾವ ಊರಿನ ಮಾವ ಏನ್‌ ಚಲುವ.. ನೋಡಯವ್ವಾ ಹುಡುಗನ…

ಹೌದ್ರಿ ಈ ಹಾಡ ಏನ್‌ ತನ್ನ ಬಗ್ಗೇನ ಬರಕೊಂಡಾನ ಈ ಚಲುವ ಅನ್ನೊಹಾಂಗಿತ್ತ ನೋಡ್ರಿ ಕಂಬಾರ ಅಜ್ಜನ ಸಮ್ಮೇಳನಾಧ್ಯಕ್ಷರ ಮೆರವಣಿಗಿ. ನೋಡಿದಾವೆಲ್ಲಾ ಈ ಚಲುವ ಈಗ ಹಿಂಗದಾನು ಇನ್‌ ವಯಸ್ಸಿನ್ಯಾಗ ಹೆಂಗಿರಬ್ಯಾಡಾ ಅಂತೇನಿ…ಅಂತ ನೋಡಿದಾವ್ರಾಲ್ಲಾ ಮಾತಾಡ್ಕೊಂಡ್ರ ಹೋಗ್‌.

ತಲಿಗೆ ಪಟಗಾ ಸುತ್ತಿದ ಡವಲೇನು? ಅಂವಾ ನಾಚಕೋತ ಕುಂತ ಧಿಗರ್‌ ಏನು? ಅಬ್ಬಬಾಬಾ…. ಹೇಳಾಕ ವಲ್ಯನಾ ಅದನ್‌…

ಇಷ್ಟ ವಯಸಾದ್ರು ಹುಡಗ ಇನ್ನೂ ಹರೇದಾವ್ರಂಗ ಹರ್ಯಾಗ ಎದ್ದ ಕುಂತ ಬಿಟ್ಟಾ ಇವತ್ತ. ಮಸ್ತ ಬಿಸಿನಿರ್‌ ಜಳಕಾ ಹೊಡದ್‌, ಲಿಂಗಪೂಜಿ ಮಾಡಕೊಂಡಂವಾ ಅಂದ್ರ, ಸಮ್ಮೇಳನಾಧ್ಯಕ್ಷರಿಗಂತ ಸಜ್ಜ ಮಾಡಿ ಇಟ್ಟಿದ್ದ ರಥದಾಗ ಕುಂತಾ ನೋಡ್ರಿ. ಹಾ.ಹಾ… ಹಂಗ… ಶಿವಾಪೂರದ ದೇಸಾಯಿ ಬಂದಂಗಾತು. ಮೆರವಣಿಗೆ ಮುಂದಕ ಹೊಂಟತು.

ಕೆಸಿಡಿ ಸರ್ಕಲ್‌ ಅಂದ್ರ ಒಂದ ಕಾಲದಾಗ ಈ ಚಲುವ ಚಲುವ್ಯಾರನ್ನ ನೋಡಕೊಂತ ಅಡ್ಯಾಡಿದ ಜಗಾ. ಮುಂದ ಹೆಜ್ಜಿ ಮ್ಯಾಳ, ಜಗ್ಗಲಿಗಿ ಅವಾಜ್‌ ಜೋರಾದಾದಂಗ ನಮ್ಮ ಚಲುವಗ ಹಳೇ ನೆನಪು ಕಣ್ಣಮುಂದ ಗುಂಯ್‌ ಗುಂಯ್‌ ಅನಕೊಂತ ಬಂದ ಹೋದು. ಎಪ್ಪಾ ಶಿವನ್‌ ಏನ ಹೇಳಲಿ ಅದರ ಡೌವಲನ್‌. ನೋಡಾವ್ರ ಕಣ್ಣಿಗೆ ಹಬ್ಬನ ಹಬ್ಬ ಹೋಗ್‌.

ಮೆರವಣಿಗೆ ಕೆಸಿಡಿ ದಾಟಿ ಜ್ಯುಬಿಲಿ ಸರ್ಕಲ್‌ನ್ಯಾಗ ಬರತಿದ್ದಂಗ ಚಲುವಗ ಒಮ್ಮೆ ಝಳಕ್‌ ಹೊಡದಂಗಾತ್‌. ಧಾರವಾಡಕ್ಕ ಓದಾಕ ಬಂದಾಗ ಇದ ಕತ್ರಾಗ ಗೋಕಾಕ-ಧಾರವಾಡ ಕೆಂಪ ಬಸ್‌ ಇಳದು ನಿಂತಿದ್ದ ಅಜ್ಜಗ ನೆನಪಾತು. ಮೆರವಣಿಗ್ಯಾಗ ಡೊಳ್ಳ ಕುಣಿತ ಜೋರಿದಿದ್ದ ನೋಡಿ ಕಲಾಭವನ ಕಡೆ ಒಮ್ಮೆ ಕಣ್ಣು ಹಾಯಿಸಿದ ಈ ಜೋಕುಮಾರ. ಪಂ.ಮಲ್ಲಿಕಾರ್ಜುನ್‌ ಮನ್ಸೂರ್‌ರ ನೆನಪಾತೇನೋ, ಒಮ್ಮೆ ಮುಗುಳ್ನಕ್ಕ ಜೋಕುಮಾರ ಸ್ವಾಮಿ. ಅಲ್ಲಿಂದ ಮೆರವಣಿಗೆ ಹಳೇ ಎಸ್‌ಪಿ ಕಚೇರಿ ದಾಟತ ನೋಡ್ರಿ, ಚಲುವನ ನಗಿ ಒಡದ ಬಿಟ್ಟತು. ಬಾಜುಕ ಕುಂತಿದ್ದ ಶ್ರೀಮತಿನ ಒಮ್ಮೆ ನೋಡಿದಾ. ಒಮ್ಮೆಲೆ ಶಿವಾಪುರ ನೆನಪಾತು.

ಅಲ್ಲಿಂದ ಮೆರವಣಿಗಿ ಪುರಮಾಶ್ಯಾಗಿ ಸಾಗಾಕತ್ತು. ಎಸ್‌ಪಿ ಕಚೇರಿ ಮುಂದ ಬರತಿದ್ದಂಗ ಎದರಿಗೆ ಗೋಕಾಕ ತಾಲೂಕ ಸುಣದಳ್ಳಿಯ ಮಲ್ಲೇಶಪ್ಪ ಕಣ್ಣಿಗ ಬೀಳಬೇಕ. ಏ ಮಲ್ಲೇಶಿ.., ಅಂದ ಚಲುವ. ಮಲ್ಲೇಶಿನು ತಡಾ ಮಾಡಲಿಲ್ಲ. ಓಡಿ ಹೋದಾಂವ, ಕೈ ಕೊಟ್ಟು ದೋಸ್ತ ಏನ್‌ ಚಲೋ ಕಾಣತ್ತಿಯೋ…ಅಂದಾ, ಚಲುವ ಒಮ್ಮೆ ನಕ್ಕಂವಾನ, ಅಲ್ಲಿ ಸಮ್ಮೇಳನಕ್ಕ ಬಾರೋ.. ಅಂತೇಳಿ ಮುಂದ ಹೊಂಟಾ. ಮಲ್ಲೇಶಿಗೆ ಕರದಂಟ ತಿಂದಷ್ಟ ಖುಷಿಯಾಗಿ ಆಜುಬಾಜು ಇದ್ದವರಿಗೆಲ್ಲಾ ಹೇಳಾಕತ್ತ ನೋಡ್ರಿ ಹಳಿ ನೆನಪಗೋಳ್ನ. ಛೇ..ಛೇ…ಏನ ರೂಪ ಹಾಂ… ಘೋಡಗಿರಿ ಶಾಲ್ಯಾಗ ಓದುಮುಂದ ಬರೀ ಕರದಂಟ ಕರದಂಟ ಅಂತೇಳಿ ಅದನ್ನ ತಿನ್ನಾಂವ, ಹಿಂಗಾಗಿ ಈಗ್ಲೂ ಕೆಂಪಗನ ಅದಾನ ನೋಡ ಚಂದ್ರು, ಅಂತಂದ.

ಒಕ್ಕಲತನದ ಕಾಲೇಜಿನ ಹತ್ರ ಬಂತನೋಡ್ರಿ ಮೆರವಣಿಗಿ…! ಚಲುವನ ಕಣ್ಣುಕೋಡಿ ತುಂಬಿಬಿದುÌ. ಸ್ಟೇಜ್‌ ನೋಡತಾನ ಚಲುವ, ಆಹಾ.. ಶಿವಾಪುರ ಇದ್ದಂಗ ಅನಸ್ತು. ಏನಿಲ್ಲಲ್ಲಿ, ಎಲ್ಲಾನೂ ಐತಿ. ಯಾಕಂದ್ರ ಅದು ಶಿವಾಪುರ. ಹೌದ್‌, ಇಡೀ ಕೃಷಿ ವಿವಿನ ಒಂದ ಶಿವಾಪುರ ಮತ್‌ ನಮ್ಮ ಚಲುವ ಶಿವಾಪುರದ ಘಟ್ಟಿ ಹುಡುಗ ಅನಿಸ್ತು. ಹೋಗಿ ಸಭಾದಾಗ ಕುಂದ್ರುವಾಗ ಒಮ್ಮೆ ಮನಸಿನ್ಯಾಗ ಸಾವಳಗಿ ಶಿವಲಿಂಗ, ಭೂಸನೂರು ಮಠದಯ್ಯನ ನೆನಸಿ ನಮ್ಮ ಚಲುವ ಧಿಗರ್‌ನಿಂದ ಕುಂತ. ನೋಡಾವ್ರ ಕಣ್ಣಿಗೆ ಹಬ್ಬ ಹಬ್ಬ ಹೋಗ್‌.

– ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.