ಮಲ್ಪೆ : ಪೊಲೀಸರ ಮೇಲೆ ಹಲ್ಲೆ
Team Udayavani, Apr 5, 2018, 6:00 AM IST
ಮಲ್ಪೆ: ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕೇಸು ದಾಖಲಿಸಲು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಮಲ್ಪೆಯಲ್ಲಿ ನಡೆದಿದೆ. ದೇವದಾಸ್ ಪುತ್ರನ್ ಮತ್ತು ಅವರ ಜತೆಗಿದ್ದ ಇನ್ನಿಬ್ಬರು ಹಲ್ಲೆ ನಡೆಸಿ ಬೆದರಿಕೆ ನೀಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊರೊನೆಟ್ ಕ್ಯಾನಿಂಗ್ ಕಂಪೆನಿ ಬಳಿ ರಾತ್ರಿ ಸುಮಾರು 11-30ರ ವೇಳೆ ವಾಹನ ತಪಾಸಣೆ ನಿರತರಾಗಿದ್ದಾಗ ಬುಲೆಟ್ನಲ್ಲಿ ಬಂದ ದೇವದಾಸ್ ಪುತ್ರನ್ ಅವರನ್ನು ತಡೆದು ನಿಲ್ಲಿಸಿ ದರು. ಬ್ರಿತ್ ಅನಲೇಸರ್ನಿಂದ ಪರಿಶೀಲಿಸಿದಾಗ ಅವರು ಅಮಲು ಪದಾರ್ಥ ಸೇವಿಸಿದ್ದು ತಿಳಿದು ಬಂದಿದ್ದ ರಿಂದ ಅವರಿಗೆ ನೋಟಿಸ್ ಜಾರಿ ಮಾಡಿ ಬುಲೆಟ್ ಅನ್ನು ವಶಪಡಿಸಲು ಪೊಲೀಸರು ಮುಂದಾದರು. ಇದಕ್ಕೆ ದೇವದಾಸ್ ಆಕ್ಷೇಪಿಸಿ, ನಾನು ಸ್ಥಳೀಯ ವ್ಯಕ್ತಿ. ಕೇಸು ದಾಖಲಿಸಿದರೆ ನಿಮ್ಮನ್ನೆಲ್ಲ ಜೀವ ಸಹಿತ ಬಿಡುವುದಿಲ್ಲ. ನೀವು ಬುಲೆಟ್ ಅನ್ನು ತೆಗೆದುಕೊಂಡು ಹೋದರೆ ನಿಮ್ಮ ಜೀಪ್ಗೆ ಬೆಂಕಿ ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ