ಉಡುಪಿಯಲ್ಲಿಂದು ಹಲಸು ಮೇಳ ಆರಂಭ
Team Udayavani, Jun 23, 2018, 9:36 AM IST
ಉಡುಪಿ: ತೋಟಗಾರಿಕೆ ಇಲಾಖೆಯ ಆಯೋಜನೆಯಲ್ಲಿ ಜೂ. 23-24ರಂದು ತೋಟ ಗಾರಿಕೆ ಇಲಾಖೆಯ ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದಲ್ಲಿ ಹಲಸು ಮೇಳವನ್ನು ಆಯೋ ಜಿಸ ಲಾಗಿದೆ. ಜೂ. 23ರ ಬೆಳಗ್ಗೆ 11ಕ್ಕೆ ಹಲಸು ಮೇಳದ ಉದ್ಘಾಟನೆ ನಡೆಯಲಿದೆ.
ಹಲಸು ಹೆಚ್ಚಿಗೆ ಖರ್ಚಿಲ್ಲದೆ ದೊರೆಯುವ ಉತ್ಪನ್ನ. ಪ್ರತಿಯೊಬ್ಬ ರೈತರು ಬೆಳೆಸಬಹುದು. ಒಂದು ಕಾಲದಲ್ಲಿ ಅದರಷ್ಟಕ್ಕೆ ಬಿದ್ದು ಹುಟ್ಟಿ ಫಲ ನೀಡು ತ್ತಿದ್ದ ಹಲಸಿಗೆ ಈಗ ಬಹುವಿಧ ಮಾರುಕಟ್ಟೆ ಇದೆ. ಆದರೂ ಹಿಂದೆ ಇದ್ದಷ್ಟು ಮರಗಳು ಈಗ ಕಾಣುತ್ತಿಲ್ಲ. ಮಾರುಕಟ್ಟೆ ಅಬಿವೃದ್ಧಿಪಡಿಸಲು ಹಲಸಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ.
ತೂಬುಗೆರೆ, ಸಖರಾಯಪಟ್ಟಣ, ಚೇಳೂರು ಹಾಗೂ ಖಾನಾಪುರ ಹಲಸಿನ ಬೆಳೆಯ ಪ್ರಸಿದ್ಧ ತಾಣ ವಾಗಿದೆ. ಸ್ಥಳೀಯವಾಗಿ ರೈತರಿಂದಲೇ ಹೆಸ ರಿಸಲ್ಪಡುವ ತಳಿಗಳು ಪ್ರಚಲಿತವಾಗಿರುತ್ತವೆ. ಸ್ವರ್ಣ ಎಂಬ ಹಲಸು ತಳಿಯನ್ನು ಬೆಂಗಳೂರು ಕೃಷಿ ವಿ.ವಿ. ಬಿಡುಗಡೆ ಮಾಡಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು ದಕ್ಷಿಣ ಭಾರತದ ಸ್ಥಳೀಯ ಹೆಸರಿನ 69 ಹಲಸಿನ ತಳಿ ಸಂಗ್ರಹ ತೋಪು ನಿರ್ಮಾಣ ಮಾಡಿದೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 6 ತಳಿಗಳನ್ನು ಗುರುತಿಸಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ಹಲಸಿನ ಹಣ್ಣು ತಿನ್ನುವು ದಕ್ಕಲ್ಲದೆ ಹಪ್ಪಳ, ಮಾಬಳ, ಹಲ್ವಾ ಚಿಪ್ಸ್, ಹಲಸಿನ ಹಣ್ಣಿನ ಸಾಟ್ ಮುಂತಾದ ಮೌಲ್ಯವರ್ಧಿತ ಉತ್ಪನ್ನ ಗಳಲ್ಲದೆ ಹಲಸಿನ ಇಡ್ಲಿ, ಕಬಾಬ…, ಐಸ್ ಕ್ರೀಮ್ ಮುಂತಾದ ಪದಾರ್ಥ ತಯಾರಿ ರೂಢಿಯಲ್ಲಿದೆ.
ಉದ್ಯಮ ಅವಕಾಶ
ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳಲ್ಲಿ ಬಹಳಷ್ಟು ಪ್ರಯೋಗಗಳು ನಡೆಯುತ್ತಿದ್ದು ಬಹುತೇಕ ಜನ ಮನ್ನಣೆ ಗಳಿಸುತ್ತಿವೆ. ಸಾಕಷ್ಟು ಸಣ್ಣ ಮಟ್ಟದ ಉದ್ದಿಮೆ ಗಳೂ ಕೂಡ ಇದ್ದು ತೋಟಗಾರಿಕೆ ಇಲಾಖೆಯ ಸಹಕಾರ ಪಡೆದು ಸ್ಥಾಪನೆಯಾಗುತ್ತಿವೆ. ದಕ್ಷಿಣ ಕನ್ನಡದಲ್ಲಿ ತೋಟಗಾರಿಕೆ ಇಲಾಖೆಯ ಪ್ರಾಯೋ ಜಿತ ಪಿಂಗಾರ ಎನ್ನುವ ರೈತ ಉತ್ಪಾದಕ ಕಂಪೆನಿಯು ಹಲಸಿನ ಹಪ್ಪಳ, ಹಲ್ವಾ, ಚಿಪ್ಸ್, ಹಲಸಿನ ಬೆರಟ್ಟಿ ಯಂತಹ ಉತ್ಪನ್ನಗಳನ್ನು ತಯಾರಿಸುತ್ತಿದೆ.
ಉಡುಪಿ ಜಿಲ್ಲೆಯಲ್ಲಿಯೂ ಮುಂದಿನ ದಿನದಲ್ಲಿ ಆಸಕ್ತ ರೈತರು ಮುಂದೆ ಬಂದಲ್ಲಿ ಕಂಪೆನಿ ಪ್ರಾರಂಭಿಸಲು ಇಲಾಖೆ ಸಹಯೋಗ ನೀಡಲಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ